ಕೇಂದ್ರ ಸರ್ಕಾರದ ಬಗ್ಗೆ ಕೆಟ್ಟ ಭಾವನೆ ಇಲ್ಲ: ರಾವತ್

ಬಹುಮತ ಸಾಬೀತುಪಡಿಸಿ ಉತ್ತರಾಖಾಂಡ್ ಮುಖ್ಯಮಂತ್ರಿಯಾಗಿ ಹಿಂದಿರುಗಲಿರುವ ಕಾಂಗ್ರೆಸ್ ಮುಖಂಡ ಹರೀಶ್ ರಾವತ್ ಕೇಂದ್ರ ಸರ್ಕಾರದ ಬಗ್ಗೆ ಯಾವುದೇ ಕೆಟ್ಟ ಭಾವನೆ ಇಲ್ಲ ಎಂದು ಬುಧವಾರ ಹೇಳಿದ್ದು,
ಹರೀಶ್ ರಾವತ್
ಹರೀಶ್ ರಾವತ್
Updated on

ಡೆಹ್ರಾಡೂನ್: ಬಹುಮತ ಸಾಬೀತುಪಡಿಸಿ ಉತ್ತರಾಖಾಂಡ್ ಮುಖ್ಯಮಂತ್ರಿಯಾಗಿ ಹಿಂದಿರುಗಲಿರುವ ಕಾಂಗ್ರೆಸ್ ಮುಖಂಡ ಹರೀಶ್ ರಾವತ್ ಕೇಂದ್ರ ಸರ್ಕಾರದ ಬಗ್ಗೆ ಯಾವುದೇ ಕೆಟ್ಟ ಭಾವನೆ ಇಲ್ಲ ಎಂದು ಬುಧವಾರ ಹೇಳಿದ್ದು, ರಾಜ್ಯದ ಪ್ರಗತಿಗೆ ಕೇಂದ್ರದ ಸಹಕಾರ ಬೇಕೆಂದಿದ್ದಾರೆ.

"ಅನಿಶ್ಚಿತತೆ ಮತ್ತು ರಾಜ್ಯ ಸಾಕಷ್ಟು ಸಮಯ ಕಳೆದುಕೊಂಡ ಈ ಅವಧಿ ಉದ್ವೇಗದಿಂದ ಕೂಡಿತ್ತು. ಆದರೆ ಎಲ್ಲವೂ ಸರಿಯಾಗಿ ಅಂತ್ಯವಾಗಿದೆ" ಎಂದು ಸುಪ್ರೀಮ್ ಕೋರ್ಟ್ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಅಂತ್ಯಗೊಳಿಸಿದ ನಂತರ ವರದಿಗಾರರಿಗೆ ರಾವತ್ ತಿಳಿಸಿದ್ದಾರೆ.

"ಈಗ ಇದು ಮುಗಿದ ಅಧ್ಯಾಯ" ಎಂದಿರುವ ರಾವತ್. ರಾಷ್ಟ್ರಪತಿ ಆಳ್ವಿಕೆಯನ್ನು ಹಿಂತೆಗೆದುಕೊಳ್ಳುತ್ತಿರುವುದನ್ನು ಸುಪ್ರೀಂ ಕೋರ್ಟ್ ಗೆ ತಿಳಿಸಿರುವ ತಿಳಿಸಿರುವ ಕೇಂದ್ರ ಸರ್ಕಾರ ಮತ್ತು ಅಟಾರ್ನಿ ಜನರಲ್ ಮುಕುಲ್ ರೋಹತ್ಗಿ ನಡೆಯನ್ನು ಗೌರಪವಪೂರ್ಣ ಎಂದು ಕರೆದಿದ್ದಾರೆ.

"ನಮಗೆ ಕೇಂದ್ರ ಸರ್ಕಾರದ ಬೆಂಬಲ ಅಗತ್ಯವಿದೆ. ನಮ್ಮದು ಸಣ್ಣ ರಾಜ್ಯ ಆದರೆ ಗುರಿ ದೊಡ್ಡದು" ಎಂದು ಸಂತಸದಿಂದಿದ್ದ ರಾವತ್ ಹೇಳಿದ್ದಾರೆ.

ಬಹುಮತ ಸಾಬೀತು ಪಡಿಸಲು ಸುಪ್ರೀಂ ಕೋರ್ಟ್ ಅವಕಾಶ ನೀಡಿದ್ದು "ಭಾರತದ ಕಾನೂನು ವ್ಯವಸ್ಥೆ ಮತ್ತು ಸಂವಿಧಾನ ಮೌಲ್ಯಗಳಲ್ಲಿ ಜನರ ನಂಬಿಕೆ ಹೆಚ್ಚಿಸಿದೆ" ಎಂದು ಕೂಡ ಅವರು ಹೇಳಿದ್ದಾರೆ.


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com