ಬಿಹಾರ ಸರ್ಕಾರ ಹೇರಿರುವ ಮದ್ಯ ನಿಷೇಧ ಆದೇಶಕ್ಕೆ ಸೆಡ್ಡು ಹೊಡೆದರೆಂಬ ಆರೋಪದ ಮೇಲೆ ಮನೋರಮಾ ದೇವಿ ವಿರುದ್ಧ ನಿತೀಶ್ ಕುಮಾರ್ ಸರ್ಕಾರ ಅರೆಸ್ಟ್ ವಾರೆಂಟ್ ಹೊರಡಿಸಿತ್ತು. ಇದಕ್ಕೆ ಮುನ್ನ ಕೊಲೆ ಆರೋಪಿಯಾಗಿರುವ ತನ್ನ ಪುತ್ರನಿಗೆ ರಕ್ಷಣೆ ನೀಡಿದರೆಂಬ ಕಾರಣಕ್ಕೆ ಮನೋರಮಾ ಅವರನ್ನು ಪಕ್ಷದಿಂದ (ಜೆಡಿಯು) ಅಮಾನತು ಮಾಡಲಾಗಿತ್ತು. ಈ ಬೆಳವಣಿಗೆಗಳನ್ನು ಅನುಸರಿಸಿ ಮನೋರಮಾ ಅವರು ಒಡನೆಯೇ ನಾಪತ್ತೆಯಾಗಿದ್ದರು.