49 ವಿಕಲಾಂಗ ಮಕ್ಕಳಿಗೆ ಒಂದೇ ಟೂತ್ ಬ್ರಷ್: ಹೆಚ್ ಎಲ್ ದತ್ತುಗೆ ಹೀಗೊಂದು ಅನುಭವ

ಕೇವಲ ಒಂದೇ ಒಂದು ಬ್ರಷ್ ನಲ್ಲಿ 49 ವಿಕಲಾಂಗ ಮಕ್ಕಳು ಪ್ರತಿದಿನ ಹಲ್ಲುಜ್ಜುವ ಪರಿಸ್ಥಿತಿ ಎದುರಾಗಿದೆ ಎಂದು ದತ್ತು ವಿವರಿಸಿದ್ದಾರೆ....
ಎಚ್.ಎಲ್ ದತ್ತು
ಎಚ್.ಎಲ್ ದತ್ತು

ನವದೆಹಲಿ: ಭ್ರಷ್ಟ ಅಧಿಕಾರಿಗಳ ಕೈಗೆ ಸಿಲುಕಿ, ಎಲ್ಲಾ ಸೌಲಭ್ಯಗಳಿಂದ ವಂಚಿತರಾಗಿ ಬದುಕುತ್ತಿರುವ ವಿಕಲಾಂಗ ಮಕ್ಕಳನ್ನು ಗೌರವದಿಂದ ನಡೆಸಿಕೊಳ್ಳುವ ಅನಿವಾರ್ಯ ಎದುರಾಗಿದೆ. ಬದಲಾವಣೆ ತರುವ ಅಧಿಕಾರ ಹೊಂದಿರುವವರು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ.

ಅಂಗ ವಿಕಲ ಮಕ್ಕಳಿಗಾಗಿ  ಸರ್ಕಾರ ನೀಡುವ ವಸತಿ ಶಾಲೆ ಮತ್ತು ಸರ್ಕಾರದ ವೃದ್ಧಾಶ್ರಮಗಳ ದಯನೀಯ ಸ್ಥಿತಿಯನ್ನು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾ. ಮೂರ್ತಿ ಎಚ್.ಎಲ್ ದತ್ತು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ.

ಸರ್ಕಾರಿ ವಸತಿ ಶಾಲೆಗಳಲ್ಲಿ ಹಣದಾಹಿ ಅಧಿಕಾರಿಗಳಿಂದಾಗಿ, ಕೇವಲ ಒಂದೇ ಒಂದು ಬ್ರಷ್ ನಲ್ಲಿ 49 ವಿಕಲಾಂಗ ಮಕ್ಕಳು ಪ್ರತಿದಿನ ಹಲ್ಲುಜ್ಜುವ ಪರಿಸ್ಥಿತಿ ಎದುರಾಗಿದೆ ಎಂದು ದತ್ತು ವಿವರಿಸಿದ್ದಾರೆ.

ನಿರ್ಲಕ್ಷ್ಯಕ್ಕೊಳಗಾಗಿರುವ ಈ ಅದೃಷ್ಟ ಹೀನ ಮಕ್ಕಳ ಕಲ್ಯಾಣಕ್ಕಾಗಿ ಅಧಿಕಾರ ಹೊಂದಿರುವವರು ಮುಂದಾಗಬೇಕು ಎಂದು ತಾವು ನೀಡಿರುವ ವರದಿಯಲ್ಲಿ ಹೇಳಿದ್ದಾರೆ.
ಅಂಗವಿಕಲ ಮಕ್ಕಳಿಗಾಗಿ ಸರ್ಕಾರ ನೀಡುತ್ತಿರುವ ಅನುದಾನದಲ್ಲಿ ಕೊರತೆಯಿಲ್ಲ, ಆದರೆ ಸರ್ಕಾರ ಬಿಡುಗಡೆ ಮಾಡುತ್ತಿರುವ ಹಣ ಸರಿಯಾದ ರೀತಿಯಲ್ಲಿ ಬಳಕೆಯಾಗುತ್ತಿಲ್ಲ, ಧನದಾಹಿಗಳ ಪಾಲಾಗುತ್ತಿದೆ ಎಂದು ಅವರು ವರದಿಯಲ್ಲಿ ತಿಳಿಸಿದ್ದಾರೆ.

ರಾಜ್ಯದ ಹಲವು ವಿಕಲಾಂಗ ಮಕ್ಕಳ ವಸತಿ ಗೃಹ ಮತ್ತು ಸರ್ಕಾರಿ ವೃದ್ಧಾಶ್ರಮಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳು ಇಲ್ಲ. ಹೀಗಾಗಿ ಸರ್ಕಾರ ಹಾಗೂ ಅಧಿಕಾರಿಗಳು ಕನಿಷ್ಠ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ನ್ಯಾ. ದತ್ತು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com