ದೇಶ
ಮುಂಬೈನ ಸಿದ್ದಿ ವಿನಾಯಕ ದೇವಾಲಯಕ್ಕೆ ಆ್ಯಪಲ್ ಕಂಪನಿ ಸಿಇಒ ಟಿಮ್ ಕುಕ್ ಭೇಟಿ
ಆ್ಯಪಲ್ ಕಂಪನಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಟಿಮ್ ಕುಕ್ ಪ್ರಸಿದ್ಧ ಸಿದ್ಧಿವಿನಾಯಕ ದೇವಾಲಯಕ್ಕೆ ಭೇಟಿ ನೀಡಿದರು....
ಮುಂಬೈ : ಆ್ಯಪಲ್ ಕಂಪನಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಟಿಮ್ ಕುಕ್ ಪ್ರಸಿದ್ಧ ಸಿದ್ಧಿವಿನಾಯಕ ದೇವಾಲಯಕ್ಕೆ ಭೇಟಿ ನೀಡಿದರು.
ಐದು ದಿನಗಳ ಭಾರತ ಭೇಟಿಗೆ ಮಂಗಳವಾರ ಮಧ್ಯರಾತ್ರಿ ಬೀಜಿಂಗ್ನಿಂದ ಮುಂಬೈಗೆ ಬಂದಿಳಿದಿದ್ದರು. ‘ನಿಗದಿತ ವೇಳಾಪಟ್ಟಿಯಂತೆ ಕುಕ್ ಅವರು ದೇವಾಲಯಕ್ಕೆ ಭೇಟಿ ನೀಡುವ ಕಾರ್ಯಕ್ರಮ ಇರಲಿಲ್ಲ.
‘ರಿಲಯನ್ಸ್ ಉದ್ಯಮ ಸಮೂಹದ ಮುಖ್ಯಸ್ಥ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಅವರೂ ಇದೇ ವೇಳೆ ದೇವಾಲಯಕ್ಕೆ ಬಂದಿದ್ದರು. ಇಬ್ಬರೂ ಕೆಲಹೊತ್ತು ಮಾತುಕತೆ
ನಡೆಸಿದರು.
ಟಿಮ್ ಕುಕ್ ಅವರು ಬ್ಯಾಂಕಿಂಗ್ ಕ್ಷೇತ್ರದ ಪ್ರಮುಖರು ಮತ್ತು ಉದ್ಯಮಿಗಳನ್ನು ಭೇಟಿಯಾದರು. ಟಾಟಾ ಸಮೂಹದ ಮುಖ್ಯಸ್ಥ ಸೈರಸ್ ಮಿಸ್ತ್ರಿ, ಟಿಸಿಎಸ್ ವ್ಯವಸ್ಥಾಪಕ ನಿರ್ದೇಶಕ ಎನ್. ಚಂದ್ರಶೇಖರನ್, ವೊಡಾಫೋನ್ ಸಿಇಒ ಸುನಿಲ್ ಸೂದ್ ಅವರನ್ನು ತಾವು ತಂಗಿರುವ ತಾಜ್ ಹೋಟೆಲ್ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.