ಹಿಂದೂಗಳ ರಕ್ಷಣೆಗೆ ಭಜರಂಗದಳದ ಕಾರ್ಯಕರ್ತರಿಗೆ ರೈಫಲ್ ತರಬೇತಿ: ಓವೈಸಿ ಕಿಡಿ

ಅಯೋಧ್ಯೆಯಲ್ಲಿ ವಿಶ್ವ ಹಿಂದೂ ಪರಿಷತ್(ವಿಎಚ್ಪಿ) ಯುವ ಘಟಕವಾಗಿರುವ ಭಜರಂಗದಳದ ಕಾರ್ಯಕರ್ತರಿಗೆ ರೈಫಲ್ ಶೂಟಿಂಗ್...
ಭಜರಂಗದಳ
ಭಜರಂಗದಳ
Updated on

ಲಖನೌ: ಅಯೋಧ್ಯೆಯಲ್ಲಿ ವಿಶ್ವ ಹಿಂದೂ ಪರಿಷತ್(ವಿಎಚ್ಪಿ) ಯುವ ಘಟಕವಾಗಿರುವ ಭಜರಂಗದಳದ ಕಾರ್ಯಕರ್ತರಿಗೆ ರೈಫಲ್ ಶೂಟಿಂಗ್ ಟ್ರೈನಿಂಗ್ ನೀಡುತ್ತಿರುವುದರ ವಿರುದ್ಧ ಎಐಎಂಐಎಂನ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ.

ಹಿಂದೂಗಳ ರಕ್ಷಣೆಗಾಗಿ ಭಜರಂಗ ದಳದ ಕಾರ್ಯಕರ್ತರಿಗೆ ರೈಫಲ್ ಶೂಟಿಂಗ್ ತರಬೇತಿ ನೀಡಲಾಗುತ್ತಿದೆಯಂತೆ. ಒಂದು ವೇಳೆ ಇದೇ ಕೆಲಸ ಮುಸ್ಲಿಂ ಸಂಘಟನೆಗಳು ಮಾಡಿದ್ದರೆ ಆಕಾಶವೇ ಮುರಿದು ಬೀಳುತ್ತಿತ್ತು. ಈ ಜೋಕರ್ ಗಳನ್ನು ಬಾರ್ಡರ್ ಗೆ ಕಳುಹಿಸಬೇಕು ಎಂದು ಓವೈಸಿ ಟ್ವೀಟ್ ಮಾಡುವ ಮೂಲಕ ವಿವಾದ ಸೃಷ್ಠಿಸಿದ್ದಾರೆ.

ಭಜರಂಗ ದಳದ ಕಾರ್ಯಕರ್ತರಿಗೆ ರೈಫಲ್ ಶೂಟಿಂಗ್, ಕತ್ತಿ ವರಸೆ ಮತ್ತು ಲಾಠಿಗಳ ಉಪಯೋಗಿಸುವ ಕುರಿತು ತರಬೇತಿ ನೀಡುತ್ತಿರುವ ವಿಡಿಯೋ ಬೆಳಕಿಗೆ ಬಂದಿದ್ದು, ಆರೋಪ-ಪತ್ಯಾರೋಪಗಳು ಶುರುವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com