ಡಿಆರ್ ಡಿಓ ಅಧಿಕಾರಿ ಪ್ರಕಾಶ್ ಸಿಂಗ್(53) ಅವರನ್ನು ಸಾರ್ವಕಾಲಿಕ ತೊಂದರೆಗಾರ ಎಂದು ಹೇಳಿ ಕೆಲಸದಿಂದ ವಜಾಗೊಳಿಸಲಾಗಿತ್ತು. ಆದರೆ, ನಿಜ ಸಂಗತಿಯೆಂದರೆ, ದೇಶದ ರಕ್ಷಣಾ ಸಂಶೋಧನೆ ಏಜೆನ್ಸಿಗೆ ನೇಮಕಾತಿ ವೇಳೆ ದುಷ್ಕೃತ್ಯ ಮತ್ತು ಆರ್ಥಿಕ ಅಕ್ರಮ ನಡೆದಿರುವ ಬಗ್ಗೆ ಪ್ರಕಾಶ್ ಸಿಂಗ್ ದನಿ ಎತ್ತಿದ್ದರು. ಅಲ್ಲದೇ ಈ ಸಂಬಂಧ ನಿರಂತರವಾಗಿ ದೂರು ನೀಡುತ್ತಿದ್ದ ಹಿನ್ನಲೆಯಲ್ಲಿ ಅವರನ್ನು 2012ರಲ್ಲಿ ಕಡ್ಡಾಯ ನಿವೃತ್ತಿಗೊಳಿಸಲಾಗಿತ್ತು.