ಭ್ರಷ್ಟಾಚಾರ, ಕಪ್ಪುಹಣ, ನಕಲಿ ಹಣ ಹಾಗೂ ಉಗ್ರವಾದವನ್ನು ತಡೆಗಟ್ಟುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡಿರುವ ಕ್ರಮ ಶ್ಲಾಘನೀಯ. ಸದ್ಯ ನೋಟುಗಳ ನಿಷೇಧದ ಪರಿಣಾಮ ಜನಸಾಮಾನ್ಯರ ಮೇಲೆ ಆಗುತ್ತಿದ್ದು ಇದು ತಾತ್ಕಾಲಿಕ ಸಮಸ್ಯೆ. ಯುದ್ಧ ನಡೆಯುವ ಸಂದರ್ಭದಲ್ಲಿ ಯೋಧರು ವಾರಗಳ ಕಾಲ ಊಟ ನಿದ್ದೆಯಿಲ್ಲದೆ ಹೋರಾಟ ನಡೆಸುತ್ತಾರೆ ಹೀಗಿರುವಾಗ ನಮ್ಮಿಂದ ಸಣ್ಣ ಸಮಸ್ಯೆಯನ್ನು ಎದುರಿಸಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದ್ದಾರೆ.