ಸಹಿ ಅಭಿಯಾನದ ನೇತೃತ್ವ ವಹಿಸಿರುವ ಪಲೋಕ್ ಬಸು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಈ ಹೊಸ ಪ್ರಸ್ತಾವನೆಯನ್ನು ಸುಪ್ರೀಂ ಕೋರ್ಟ್ ಗಮನಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ 2010 ರ ಸೆಪ್ಟೆಂಬರ್ 30 ರಂದು ತೀರ್ಪು ನೀಡಿದ್ದ ಅಲಹಾಬಾದ್ ಹೈಕೋರ್ಟ್, ವಿವಾದಿತ ಪ್ರದೇಶವನ್ನು ಮುಸ್ಲಿಂ ಸಮುದಾಯ, ನಿರ್ಮೋಹಿ ಅಖಾಡ, ಹಾಗೂ ರಾಮಮಂದಿರಕ್ಕೆ ಹಂಚಿಕೆ ಮಾಡಿ ಆದೇಶ ನೀಡಿತ್ತು. ಇದಾದ ಬಳಿಕ ತಾವು ವ್ಯಾಜ್ಯದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದ ಮೂಲ ಅರ್ಜಿದಾರ ಮೊಹಮ್ಮದ್ ಹಾಷಿಂ ಅನ್ಸಾರಿ 2016 ರ ಜುಲೈ ನಲ್ಲಿ ಮೃತಪಟ್ಟಿದ್ದರು.