ಈಗ ಸ್ವತಃ ಬಿಜೆಪಿ ಶಾಸಕರೇ ಕೆಂದ್ರ ಸರ್ಕಾರದ ಕ್ರಮ ಅಂಬಾನಿ, ಅದಾನಿಗಳಿಗೆ ತಿಳಿದಿತ್ತು ಎಂದು ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದಾರೆ. ರಾಜಸ್ಥಾನದ ಬಿಜೆಪಿ ಶಾಸಕರಾಗಿರುವ ಭವಾನಿ ಸಿಂಗ್ ರಾಜವತ್, 500, 1000 ರೂ ನೋಟುಗಳ ರದ್ದತಿ ಬಗ್ಗೆ ಅಂಬಾನಿ ಹಾಗೂ ಅದಾನಿಗೆ ಮುಂಚೆಯೇ ಸುಳಿವು ದೊರೆತಿತ್ತು, ಕೇಂದ್ರ ಸರ್ಕಾರದ ಘೋಷಣೆಗೆ ಅನುಗುಣವಾಗಿ ತಾವು ಎಲ್ಲವನ್ನೂ ಸಿದ್ಧಪಡಿಸಿಕೊಂಡಿದ್ದರು, ನೀವು(ಸರ್ಕಾರ) ಹೊಸ ನೋಟುಗಳನ್ನು ಬೇಡಿಕೆಗೆ ತಕ್ಕಂತೆ ಮುದ್ರಿಸಬೇಕಿತ್ತು ಎಂದು ಹೇಳಿರುವುದು ಕ್ಯಾಮರಾದಲ್ಲಿ ದಾಖಲಾಗಿದೆ.