ಈ ಸಂದರ್ಭದಲ್ಲಿ ವಿರೋಧ ಪಕ್ಷಗಳ ಮೇಲೆ ತೀವ್ರ ವಾಗ್ದಾಳಿ ಮುಂದುವರಿಸಿದ ಪ್ರಧಾನಿ, ನೋಟುಗಳ ಅಪಮೌಲ್ಯೀಕರಣದ ವಿರುದ್ಧ ಪ್ರತಿಭಟನೆ ಮಾಡುವವರ ಬಳಿಯಿಂದ ನಾನು ಪ್ರಾಮಾಣಿಕತೆಯ ಸರ್ಟಿಫಿಕೇಟ್ ಪಡೆಯಬೇಕಾಗಿಲ್ಲ. ಎಲ್ಲಿಯವರೆಗೆ ದೇಶ ಸುಮ್ಮನೆ ಕುಳಿತುಕೊಳ್ಳಬೇಕು, ನಾವು ಯಾಕೆ ಭ್ರಷ್ಟಾಚಾರದ ವಿರುದ್ಧ ಕ್ರಮ ತೆಗೆದುಕೊಳ್ಳಬಾರದು, 70 ವರ್ಷಗಳವರೆಗೆ ನಮ್ಮ ದೇಶವನ್ನು ಆಳಿದವರು ಈ ಅವ್ಯವಸ್ಥೆಯ ಬಗ್ಗೆ ತಿಳಿದಿದ್ದರು. ಆದರೆ ಅಧಿಕಾರದ ಆಸೆಯಿಂದ ಅವರು ಕ್ರಮ ಕೈಗೊಂಡಿರಲಿಲ್ಲ ಎಂದು ಪ್ರಧಾನಿ ರ್ಯಾಲಿಯಲ್ಲಿ ಹೇಳಿದರು.