ವಿಶ್ವಸಂಸ್ಥೆಯ ನಿಯೋಗದ ಭಾಗವಾಗಿ ಕಾಂಗೊದಲ್ಲಿ ಬ್ರಿಕ್ರಂ ಸಿಂಗ್ ನೇತೃತ್ವದ ಪಡೆಯಲ್ಲಿ ಖಮರ್ ಜಾವೇದ್ ಬಾಜ್ವಾ ಸಹ ಭಾಗವಹಿಸಿದ್ದರು. ಕಾಂಗೋದಲ್ಲಿ ಬಾಜ್ವಾ ಅದ್ಭುತ ಕಾರ್ಯಾಚರಣೆ ನಡೆಸಿದ್ದರು. ವಿಶ್ವಸಂಸ್ಥೆ ನೀಡಿದ್ದ ಕೆಲಸದಲ್ಲಿ ಬಾಜ್ವಾ ಅದ್ಭುತ ಕೆಲಸಗಳನ್ನು ಮಾಡಿರಬಹುದು ಆದರೆ ಒಮ್ಮೆ ಅವರು ಅವರ ದೇಶಕ್ಕೆ ವಾಪಸ್ ಹೋದ ನಂತರ ಅವರ ರಾಷ್ಟ್ರೀಯ ಹಿತಾಸಕ್ತಿಗಳೇ ಮುಖ್ಯವಾಗಿರುತ್ತದೆ. ಆದ್ದರಿಂದ ಭಾರತ ಪಾಕ್ ನೂತನ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.