ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿಯ ದಾಖಲೆ ಬಿಡುಗಡೆ ಮಾಡುವ ಮೂಲಕ ಪಾಕಿಸ್ತಾನದ ಬಣ್ಣ ಬಯಲು ಮಾಡಬೇಕೆಂಬ ಮನವಿಯನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪುನರುಚ್ಚರಿಸಿದ್ದಾರೆ.
ಸೇನೆ ನಡೆಸಿರುವ ಸೀಮಿತ ದಾಳಿ ಬಗ್ಗೆ ಪಾಕಿಸ್ತಾನ ಸುಳ್ಳು ಹೇಳುತ್ತಿದೆ. ಆದರೆ ಮಾಧ್ಯಮಗಳು ಪಾಕಿಸ್ತಾನದ ಪ್ರಚಾರವನ್ನು ಸುಳ್ಳು ಎಂಬುದನ್ನು ಬಯಲು ಮಾಡುತ್ತಿರುವುದು ಸಂತಸದ ವಿಷಯ, ಮಾಧ್ಯಮಗಳು ಪಾಕ್ ನ್ನು ಬಯಲುಗೊಳಿಸುತ್ತಿರುವಂತೆಯೇ ಕೇಂದ್ರ ಸರ್ಕಾರ ಸಹ ಪಾಕಿಸ್ತಾನದ ಬಯಲುಗೊಳಿಸಬೇಕು ಎಂದು ಕೇಜ್ರಿವಾಲ್ ಮತ್ತೊಮ್ಮೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಪಾಕಿಸ್ತಾನ ಆಡಳಿತ ಕಾಶ್ಮೀರದ ಅಧಿಕಾರಿಯೊಬ್ಬರು ಭಾರತೀಯ ಸೇನೆ ನಡೆಸಿರುವ ದಾಳಿಯನ್ನು ಒಪ್ಪಿಕೊಂಡಿರುವ ಮಾಧ್ಯಮ ವರದಿಯನ್ನು ಅರವಿಂದ್ ಕೇಜ್ರಿವಾಲ್ ಉಲ್ಲೇಖಿಸಿ ಭಾರತ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಮಾಡಿದ್ದಾರೆ.
Advertisement