ಉರಿ ಉಗ್ರದಾಳಿ ಬಗ್ಗೆ ಮಾತನಾಡಿದ ಫವಾದ್ ಖಾನ್, ಆದರೆ ಉಗ್ರವಾದದ ಖಂಡನೆ ಇಲ್ಲ!

ಪಾಕಿಸ್ತಾನದ ನಟ ಫವಾದ್ ಖಾನ್ ಸಹ ಉರಿಯಲ್ಲಿ ನಡೆದ ಭಯೋತ್ಪಾದಕ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಭಯೋತ್ಪಾದಕ ದಾಳಿಯನ್ನು ನೇರವಾಗಿ ಖಂಡಿಸಿಲ್ಲ.
ಫವಾದ್ ಖಾನ್
ಫವಾದ್ ಖಾನ್

ಉರಿಯಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಪಾಕಿಸ್ತಾನದ ಗಾಯಕ ಶಫ್‌ಕತ್ ಅಮಾನತ್ ಅಲಿ ಖಂಡಿಸಿದ ಬೆನ್ನಲ್ಲೇ ಪಾಕಿಸ್ತಾನದ ನಟ ಫವಾದ್ ಖಾನ್ ಸಹ ಉರಿಯಲ್ಲಿ ನಡೆದ ಭಯೋತ್ಪಾದಕ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಭಯೋತ್ಪಾದಕ ದಾಳಿಯನ್ನು ನೇರವಾಗಿ ಖಂಡಿಸಿಲ್ಲ.


ಉರಿಯಲ್ಲಿ ನಡೆದ ಭಯೋತ್ಪಾದಕ ದಾಳಿ ಬಗ್ಗೆ ಫೇಸ್ ಬುಕ್ ನ ಪೇಜ್ ನಲ್ಲಿ ಬರೆದಿರುವ ಫವಾದ್ ಖಾನ್, ಕಳೆದ ಕೆಲವುದಿನಗಳ ಹಿಂದೆ ನಡೆದ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಮಾಧ್ಯಮ ಹಾಗೂ ವಿಶ್ವಾದ್ಯಂತ ಇರುವ ಹಿತೈಷಿಗಳು ಕೇಳುತ್ತಿದ್ದಾರೆ. ಇಬ್ಬರು ಮಕ್ಕಳ ತಂದೆಯಾಗಿ, ಇತರರಂತೆಯೇ ನಾನು ಸಹ ಒಗ್ಗಟ್ಟಿನಿಂದ ಶಾಂತಿಯುತ ವಿಶ್ವ ನಿರ್ಮಾಣವಾಗಲಿ ಎಂದು ಪ್ರಾರ್ಥಿಸುತ್ತೇನೆ. ಶಾಂತಿಯುತ ಜಗತ್ತನ್ನು ನಾವು ನಮ್ಮ ಮಕ್ಕಳಿಗೆ ಉಳಿಸಬೇಕೆಂಬುದು ತಮ್ಮ ಅಭಿಪ್ರಾಯ ಎಂದು ಫವಾದ್ ಖಾನ್ ಹೇಳಿದ್ದಾರೆ.   
ಒಡೆದು ಹೋಗುತ್ತಿರುವ ವಿಶ್ವವನ್ನು ಒಗ್ಗೂಡಿಸಲು ಯತ್ನಿಸಿರುವ ಎಲ್ಲಾ ಭಾರತೀಯರಿಗೂ, ಪಾಕಿಸ್ತಾನದ ಸಹ ಕಲಾವಿದರಿಗೂ ಧನ್ಯವಾದ ತಿಳಿಸುತ್ತೇನೆ, ಘಟನೆ ನಡೆದ ಬಳಿಕ ಇದೆ ಮೊದಲ ಬಾರಿಗೆ ನಾನು ಮಾತನಾಡಿದ್ದೇನೆ ಎಂದು ಫವಾದ್ ಖಾನ್ ತಿಳಿಸಿದ್ದಾರೆ. ಉರಿಯಲ್ಲಿ ಪಾಕಿಸ್ತಾನದ ಭಯೋತ್ಪಾದಕರು ದಾಳಿ ನಡೆಸಿದ್ದನ್ನು ಭಾರತದಲ್ಲಿರುವ ಪಾಕಿಸ್ತಾನಿ ಕಲಾವಿದರು ಖಂಡಿಸಬೇಕು ಇಲ್ಲವೇ ಭಾರತ ಬಿಟ್ಟು ಹೋಗಬೇಕು ಎಂದು ಎಂಎನ್ ಎಸ್ ಎಚ್ಚರಿಕೆ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com