ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ಕೆಲಸಗಳಿಗಾಗಿ ಮೀಸಲಿಟ್ಟ ಹಣವಾದ 25-15 ಯೋಜನೆಯ ಹಣದಿಂದ ಯಾರನ್ನೂ ಬೇಕಾದರೂ ತಮ್ಮ ಕಡೆಗೆ ಬರಮಾಡಿಕೊಳ್ಳಬಹುದು ಎಂದು ಅವರು ಸಂಭಾಷಣೆಯಲ್ಲಿ ಹೇಳಿದ್ದಾರೆ. ಅಲ್ಲದೆ ಅರ್ಚಕರಿಗೆ ಬೆದರಿಕೆಯೊಡ್ಡಿರುವುದು, ಹಣದಿಂದ ಜನರನ್ನು ತನ್ನತ್ತ ಸೆಳೆದುಕೊಳ್ಳಬಲ್ಲೆ ಎಂದು ಹೇಳಿರುವುದೆಲ್ಲ ದಾಖಲಾಗಿದೆ.