ದೀನ್ ದಯಾಳ್ ಉಪಾಧ್ಯಾಯ ಅವರ ತತ್ವಗಳ ಪುಸ್ತಕ ಬಿಡುಗಡೆ ಮಾಡಿದ ಪ್ರಧಾನಿ

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ತತ್ವಗಳಿಗೆ ಸಂಬಂಧಪಟ್ಟ ಸರಣಿ ಪುಸ್ತಕಗಳನ್ನು...
ದೆಹಲಿಯಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ತತ್ವಗಳಿಗೆ ಸಂಬಂಧಪಟ್ಟ ಸರಣಿ ಪುಸ್ತಕಗಳನ್ನು ಬಿಡುಗಡೆ ಮಾಡಿದ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕೂಡ ಇದ್ದರು.
ದೆಹಲಿಯಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ತತ್ವಗಳಿಗೆ ಸಂಬಂಧಪಟ್ಟ ಸರಣಿ ಪುಸ್ತಕಗಳನ್ನು ಬಿಡುಗಡೆ ಮಾಡಿದ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕೂಡ ಇದ್ದರು.
ನವದೆಹಲಿ: ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ತತ್ವಗಳಿಗೆ ಸಂಬಂಧಪಟ್ಟ ಸರಣಿ ಪುಸ್ತಕಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ಬಿಡುಗಡೆ ಮಾಡಿದರು.
15 ಸಂಪುಟಗಳ ಈ ಹೊತ್ತಿಗೆಯು ಉಪಾಧ್ಯಾಯ ಅವರ ಜೀವನದ ಪ್ರಮುಖ ಘಟನೆಗಳು, ಜನಸಂಘದ ಪ್ರಯಾಣ,1965ರ ಭಾರತ-ಪಾಕಿಸ್ತಾನ ಯುದ್ಧ, ತಾಷ್ಕೆಂಟ್ ಒಪ್ಪಂದ ಮತ್ತು ಗೋವಾದ ವಿಮೋಚನೆ ಮೊದಲಾದ ವಿಷಯಗಳನ್ನು ಒಳಗೊಂಡಿದೆ.
1967ರಲ್ಲಿ ಉಪಾಧ್ಯಾಯ ಅವರು ಜನಸಂಘದ ಮುಖ್ಯಸ್ಥರಾದ ನಂತರ ಅವರನ್ನು ಹತ್ಯೆಗೈದವರೆಗಿನ ಸಂಗತಿಗಳನ್ನು ಸಂಪುಟ ಒಳಗೊಂಡಿದೆ.
ಅವಿಭಾಜ್ಯ ಮಾನವತಾವಾದದ ಸಂಶೋಧನೆ ಮತ್ತು ಅಭಿವೃದ್ಧಿ ಫೌಂಡೇಶನ್ ಮತ್ತು ಪ್ರಭಾತ್ ಪಬ್ಲಿಕೇಶನ್ ಪುಸ್ತಕವನ್ನು ಹೊರತಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com