ಪಾಕ್ ಗೆ ಪದ್ಯದ ಮೂಲಕ ತಿರುಗೇಟು ನೀಡಿದ್ದ ಯೋಧನಿಗೆ ಜೀವಬೆದರಿಕೆ!

ಉರಿ ಸೆಕ್ಟರ್ ನ ಸೇನಾ ಕಚೇರಿ ಮೇಲೆ ಉಗ್ರರು ದಾಳಿ ನಡೆಸಿದ ನಂತರ ಪಾಕಿಸ್ತಾನಕ್ಕೆ ಪದ್ಯದ ಮೂಲಕ ತಿರುಗೇಟು ನೀಡಿದ್ದ ಯೋಧನಿಗೆ ಜೀವಬೆದರಿಕೆ ಬಂದಿರುವ ಬಗ್ಗೆ ವರದಿ ಪ್ರಕಟವಾಗಿದೆ.
ಪಾಕ್ ಗೆ ಪದ್ಯದ ಮೂಲಕ ತಿರುಗೇಟು ನೀಡಿದ್ದ ಯೋಧ
ಪಾಕ್ ಗೆ ಪದ್ಯದ ಮೂಲಕ ತಿರುಗೇಟು ನೀಡಿದ್ದ ಯೋಧ
Updated on

ನವದೆಹಲಿ: ಉರಿ ಸೆಕ್ಟರ್ ನ ಸೇನಾ ಕಚೇರಿ ಮೇಲೆ ಉಗ್ರರು ದಾಳಿ ನಡೆಸಿದ ನಂತರ ಪಾಕಿಸ್ತಾನಕ್ಕೆ ಪದ್ಯದ ಮೂಲಕ ತಿರುಗೇಟು ನೀಡಿದ್ದ ಯೋಧನಿಗೆ ಜೀವಬೆದರಿಕೆ ಬಂದಿರುವ ಬಗ್ಗೆ ವರದಿ ಪ್ರಕಟವಾಗಿದೆ.


ಹಿಮಾಚಲ ಪ್ರದೇಶದ ಯೋಧನಾಗಿರುವ ಮನೋಜ್ ಠಾಕೂರ್, ತಮಗೆ ಜೀವಬೆದರಿಕೆ ಬರುತ್ತಿರುವುದರ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದಿದ್ದಾರೆ. ತಾವು ಪದ್ಯದ ಮೂಲಕ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ ಬಳಿಕ ತಮಗೆ ಜೀವಬೆದರಿಕೆ ಬರುತ್ತಿದೆ ಎಂದು ಮನೋಜ್ ಠಾಕೂರ್ ಫೇಸ್ ಬುಕ್ ಸ್ಟೇಟಸ್ ನಲ್ಲಿ ಬರೆದುಕೊಂಡಿದ್ದಾರೆ. ಬೆದರಿಕೆಗಳಿಗೆ ಅಂಜುವುದಿಲ್ಲ ಎಂದು ಹೇಳಿರುವ ಮನೋಜ್ ಠಾಕೂರ್, ತಮಗೆ ಬೆದರಿಕೆ ಹಾಕುವ ಯಾವುದೇ ಭಯೋತ್ಪಾದಕರು ಎದುರುಗೊಂಡರೆ ಅವರನ್ನು ಹತ್ಯೆ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಉರಿ ಸೆಕ್ಟರ್ ನ ಸೇನಾ ಪ್ರಧಾನ ಕಚೇರಿ ಮೇಲೆ ಉಗ್ರರು ನಡೆಸಿದ ದಾಳಿ ನಂತರ ಯೋಧರ ತಂಡವೊಂದು ಸೇನಾ ವಾಹನದಲ್ಲಿ ಹೋಗುತ್ತಿದ್ದು, ವಾಹನ ಚಲಿಸುತ್ತಿದ್ದ ವೇಳೆಯಲ್ಲಿ ಯೋಧನೊಬ್ಬ ಪದ್ಯದ ಮೂಲಕ ಪಾಕಿಸ್ತಾನಕ್ಕೆ ಸವಾಲೆಸೆದಿದ್ದರು. ಪದ್ಯದ ಮೂಲಕ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದ ಯೋಧನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com