ಪೊಲೀಸ್ ಮೂಲಗಳ ಪ್ರಕಾರ, ಶ್ರೀನಗರದ ಹೊರವಲಯದಲ್ಲಿ ಉದ್ಯಮ ಅಭಿವೃದ್ಧಿ ಸಂಸ್ಥೆಯ ಒಳಗೆ ಇಂದು ನಸುಕಿನ ಜಾವ 6.30ರ ಸುಮಾರಿಗೆ ನುಗ್ಗಿದ ಭಯೋತ್ಪಾದಕರು ಭದ್ರತಾ ಪಡೆಯವರ ಗಮನ ಸೆಳೆಯಲು ಗುಂಡಿನ ಸುರಿಮಳೆಗೈದರು.ಕೂಡಲೇ ಕಾರ್ಯಪ್ರವೃತ್ತರಾದ ಭದ್ರತಾ ಯೋಧರು ಕಟ್ಟಡವನ್ನು ಸುತ್ತುವರಿದಿದ್ದು ಶೋಧ ಕಾರ್ಯ ನಡೆಯುತ್ತಿದೆ. ಭಯೋತ್ಪಾದಕರು ಕಟ್ಟಡದೊಳಗೆ ಸಿಲುಕಿ ಹಾಕಿಕೊಂಡಿದ್ದಾರೆ. ಉಗ್ರಗಾಮಿಗಳು ತಪ್ಪಿಸಿಕೊಂಡು ಹೋಗಬಹುದಾದ ಹಾದಿಗಳನ್ನೆಲ್ಲ ಮುಚ್ಚಲಾಗಿದೆ.