ಯುಪಿಎ ಸರ್ಕಾರದಲ್ಲಿನ ಹಗರಣಗಳನ್ನು ಉಲ್ಲೇಖಿಸಿ, ''2006ರಲ್ಲಿ ಜಲಾಂತರ್ಗಾಮಿ ನೌಕೆ ದಲ್ಲಾಳಿ ನಡೆದಿತ್ತು.ಹೆಲಿಕಾಪ್ಟರ್ ನ ದಲ್ಲಾಳಿ ಕೂಡ ಆಗಿತ್ತು'' ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಆರೋಪಿಸಿದ್ದರು. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ರಕ್ತದ ದಲ್ಲಾಳಿ ಎಂದು ಆರೋಪಿಸಿದ್ದಕ್ಕೆ ಪರಿಕ್ಕರ್ ಈ ಪ್ರತಿಕ್ರಿಯೆ ನೀಡಿದ್ದರು.