ರಾಜ್ ಠಾಕ್ರೆ ಅವರು ಒಟ್ಟು ಮೂರು ಬೇಡಿಕೆಗಳನ್ನು ಇಟ್ಟಿದ್ದರು. ಆ ಪೈಕಿ ಎರಡು ಬೇಡಿಕೆಗೆ ಯಾವುದೇ ಆಕ್ಷೇಪ ವ್ಯಕ್ತವಾಗಲಿಲ್ಲ. ಆದರೆ 5 ಕೋಟಿ ರುಪಾಯಿ ದೇಣಿಗೆ ವಿಷಯ ಬಂದಾಗ ನಾನು ಮಧ್ಯಪ್ರವೇಶಿಸಿ, ಚಿತ್ರ ನಿರ್ಮಾಪಕರು ಇದಕ್ಕೆ ಒಪ್ಪಿಕೊಳ್ಳಬೇಕಾಗಿಲ್ಲ. ದೇಣಿಗೆ ಸ್ವಯಂ ಪ್ರೇರಿತವಾಗಿರಬೇಕು. ಇದನ್ನು ನಿರ್ಮಾಪಕರು ಕಡ್ಡಾಯವಾಗಿ ಒಪ್ಪಿಕೊಳ್ಳಬೇಕಾಗಿಲ್ಲ ಎಂದು ತಾವು ಸ್ಪಷ್ಟಪಡಿಸಿರುವುದಾಗಿ ಮಹಾ ಸಿಎಂ ಹೇಳಿದ್ದಾರೆ.