ಮುಂಬೈ: ತನ್ನ ಕಾರಿನ ಟಯಲ್ ಮೇಲೆ ಮೂತ್ರ ಮಾಡಿದೆ ಎಂದು ನಾಯಿ ಮೇಲೆ ನಿಷ್ಕರುಣಿಯೊಬ್ಬ ಕಾರನ್ನು ಚಲಾಯಿಸಿ ಅಮಾನವೀಯತೆ ಮೆರೆದಿದ್ದಾನೆ.
ಮುಂಬೈನಲ್ಲಿ ಕಸ್ಟಮರ್ ಸರ್ವಿಸ್ ಎಕ್ಸಿಕ್ಯುಟಿವ್ ಆಗಿ ಕೆಲಸ ನಿರ್ವಹಿಸುತ್ತಿರುವ ಸೌರಭ್ ದುಕಂಡೆ ಎಂಬಾತನೇ ದುಷ್ಕೃತ್ಯ ಎಸಗಿರುವ ಭೂಪ. ಬೀದಿ ನಾಯಿಯಾಗಿದ್ದ ಬಾಂಡ್ಯಾ ಆ ಪ್ರದೇಶದಲ್ಲಿ ಎಲ್ಲರ ನೆಚ್ಚಿನ ನಾಯಿ ಎನಿಸಿಕೊಂಡಿತ್ತು. ಆದರೆ ಸೌರಭ್ ಮಾತ್ರ ತನ್ನ ಕಾರಿನ ಟಯಲ್ ಮೇಲೆ ಮೂತ್ರ ವಿಸರ್ಜನೆ ಮಾಡಿದೆ ಎಂಬ ಕಾರಣಕ್ಕೆ ಕುಪಿತಗೊಂಡು ರಸ್ತೆ ಬದಿ ಮಲಗಿದ್ದ ನಾಯಿ ಮೇಲೆ ಕಾರು ಹರಿಸಿ ಸೇಡು ತೀರಿಸಿಕೊಂಡಿದ್ದಾನೆ.
ನಾಯಿ ಮೇಲೆ ಸೌರಭ್ ಕಾರು ಹರಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರು ಹರಿಯುತ್ತಿದ್ದಂತೆ ನಾಯಿ ನೋವಿನಿಂದ ಜೋರಾಗಿ ಕೂಗಾಡಿದೆ. ಕೂಡಲೇ ಘಟನಾ ಸ್ಥಳಕ್ಕೆ ಬಂದ ಸ್ಥಳೀಯರು ನಾಯಿಯನ್ನು ಚಿಕಿತ್ಸಾಲಯಕ್ಕೆ ದಾಖಲಿಸಿದ್ದಾರೆ.
ಸೌರಭ್ ನ ಅಮಾನವೀಯತೆಯ ಕೃತ್ಯವನ್ನು ಸ್ಥಳೀಯನೊಬ್ಬ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ದು, ಈ ವಿಡಿಯೋ ವೈರಲ್ ಆಗಿದ್ದು, ಸೌರಭ್ ಕೃತ್ಯದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ.
Advertisement