ಭುವನೇಶ್ವರ ಎಸ್ ಯುಎಂ ಆಸ್ಪತ್ರೆ ಪ್ರಾಯೋಜಕ ಮನೋಜ್ ನಾಯಕ್ ಗೆ ಜಾಮೀನು

ಎಸ್ ಯುಎಂ ಆಸ್ಪತ್ರೆಯ ಅಗ್ನಿ ದುರಂತ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿದ್ದ ಆಸ್ಪತ್ರೆಯ ಪ್ರಾಯೋಜಕ ಮನೋಜ್ ರಂಜನ್...
ಎಸ್ ಯುಎಂ ಆಸ್ಪತ್ರೆ
ಎಸ್ ಯುಎಂ ಆಸ್ಪತ್ರೆ
ಭುವಶ್ನೇಶ್ವರ: ಎಸ್ ಯುಎಂ ಆಸ್ಪತ್ರೆಯ ಅಗ್ನಿ ದುರಂತ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿದ್ದ ಆಸ್ಪತ್ರೆಯ ಪ್ರಾಯೋಜಕ ಮನೋಜ್ ರಂಜನ್ ನಾಯಕ್ ಅವರಿಗೆ ಜಿಲ್ಲಾ ನ್ಯಾಯಾಲಯ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು, ಆರೋಪಿಗಳಾದ ಮನೋಜ್ ರಂಜನ್ ನಾಯಕ್ ಹಾಗೂ ಆಸ್ಪತ್ರೆ ಮೇಲ್ವಿಚಾರಕ ಡಾ.ಪುಷ್ಪರಾಜ್ ಸಮಂತಸಿಂಗಾರ್ ಅವರಿಗೆ ಜಾಮೀನು ನೀಡಿದೆ.
ಒಂದು ಲಕ್ಷ ರುಪಾಯಿ ಬಾಂಡ್ ಹಾಗೂ ಇಬ್ಬರು ಹೊಣೆಗಾರರ ಮೇಲೆ ಜಾಮೀನು ನೀಡಿದೆ. ಅಲ್ಲದೆ ತನಿಖೆಗೆ ಸಹಕರಿಸುವಂತೆ ಕೋರ್ಟ್ ಆರೋಪಿಗಳಿಗೆ ಸೂಚಿಸಿದೆ.
25 ಮಂದಿಯನ್ನು ಬಲಿಪಡೆದ ಅಕ್ಟೋಬರ್ 17ರ ಅಗ್ನಿ ದುರಂತದ ನಂತರ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳು ಇಂದು ಸಂಜೆ ಜಾಮೀನಿನ ಮೇಲೆ ಬಿಡುಗಡೆಯಾಗುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com