ಇಂಡೋ-ಟಿಬೆಟಿಯನ್ ಗಡಿ ಭದ್ರತಾ ಪಡೆಯ 55ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜನಾಥ್ ಸಿಂಗ್ ನೆರೆಯ ರಾಷ್ಟ್ರ ಪಾಕಿಸ್ತಾನ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ನೆರೆಯ ರಾಷ್ಟ್ರ ನಮ್ಮ ಮೇಲೆ ಪರೋಕ್ಷ ಯುದ್ಧ ಮಾಡುತ್ತಲೇ ಬಂದಿದೆ. ಆದರೆ ಭಯೋತ್ಪಾದನೆ ಪರಾಕ್ರಮಿಗಳ ಅಸ್ತ್ರವಲ್ಲ ಅದು ಹೇಡಿಗಳ ಅಸ್ತ್ರ ಎಂದು ಹೇಳಿದರು.