ಗಡಿಯಲ್ಲಿ ನಿಂತು ದೇಶಕ್ಕೆ ರಕ್ಷಣೆ ಮಾಡುತ್ತಿರುವ ಯೋಧರೊಂದಿಗೆ ದೀಪಾವಳಿ ಆಚರಿಸುವ ಮೂಲಕ ಧಾರ್ಮಿಕ ಮುಖಂಡರು ಯೋಧರಲ್ಲಿ ಮತ್ತಷ್ಟು ಆತ್ಮವಿಶ್ವಾಸ ತುಂಬಿದ್ದಾರೆ. ರಿಶಿಕೇಶದ ಪರ್ಮಾರ್ಥ ನಿಕೇತನ್ ಆಶ್ರಮದ ಸ್ವಾಮಿ ಚಿದಾನಂದ ಸರಸ್ವತಿ, ಅಹಿಂಸಾ ವಿಶ್ವಭಾರ್ತಿ ಆಶ್ರಮದ ಲೋಕೇಶ್ ಮುನಿ, ಆಲ್ ಇಂಡಿಯಾ ಇಮಾಮ್ ಆರ್ಗನೈಸೇಷನ್ ಮುಖಂಡ ಇಮಾಮ್ ಉಮರ್ ಮಹ್ಮದ್ ಹಾಗೂ ಗೋಲ್ಡನ್ ಟೆಂಪಲ್ ನ ಸಂತ ಗ್ಯಾನಿ ಗುರ್ಬಚನ್ ಸಿಂಗ್ ಸೇರಿದಂತೆ ಧಾರ್ಮಿಕ ಮುಖಂಡರು ವಾಘಾ ಗಡಿಗೆ ತೆರಳಿ ದೀಪಾವಳಿ ಆಚರಿಸಿದರು.