ದೇಶದ್ರೋಹ ಕೆಲಸ ಮಾಡುವವರನ್ನು ಬಂಧಿಸಿ: ಭದ್ರತಾ ಸಂಸ್ಥೆಗೆ ಬಿಜೆಪಿ ಒತ್ತಾಯ

ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯರ ಸಹಾಯಕರಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಯನ್ನು ದೇಶದ್ರೋಹ...
ಉತ್ತರ ಪ್ರದೇಶ ರಾಜ್ಯಸಭಾ ಸಂಸದ ಚೌಧರಿ ಮುನವ್ವರ್ ಸಲೀಂ
ಉತ್ತರ ಪ್ರದೇಶ ರಾಜ್ಯಸಭಾ ಸಂಸದ ಚೌಧರಿ ಮುನವ್ವರ್ ಸಲೀಂ
Updated on
ನವದೆಹಲಿ: ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯರ ಸಹಾಯಕರಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಯನ್ನು ದೇಶದ್ರೋಹದ ಚಟುವಟಿಕೆ ಮೇಲೆ ಬಂಧಿಸಿರುವುದು ದುರದೃಷ್ಟಕರ ಎಂದು ಬಿಜೆಪಿ ಸಂಸದ ಸತ್ಯಪಾಲ್ ಸಿಂಗ್ ಹೇಳಿದ್ದಾರೆ. ಸಮಾಜವಾದಿ ಪಕ್ಷದ ಸಂಸದ ಚೌಧರಿ ಮುನವ್ವರ್ ಸಲೀಮ್ ಅವರ ಖಾಸಗಿ ಸಹಾಯಕರ ಬಂಧನ ಕುರಿತು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 
ದೇಶದ್ರೋಹಿ ಕೆಲಸದಲ್ಲಿ ತೊಡಗಿರುವ ಎಲ್ಲರನ್ನೂ ಅವರ ಸ್ಥಾನಮಾನ ಪರಿಗಣಿಸದೆ ಬಂಧಿಸಬೇಕೆಂದು ಭದ್ರತಾ ಸಂಸ್ಥೆಯನ್ನು ಅವರು ಒತ್ತಾಯಿಸಿದ್ದಾರೆ.ಸಂಸದರ ಕೆಳಗೆ ಕೆಲಸ ಮಾಡುವ ಒಬ್ಬರನ್ನು ಬಂಧಿಸುವುದು ನಿಜಕ್ಕೂ ದುರದೃಷ್ಟಕರ. ಈ ಸಂಬಂಧ ಮಾಧ್ಯಮಗಳಲ್ಲಿ ಬರುವ ವರದಿಗಳನ್ನೂ ಗಂಭೀರವಾಗಿ ಪರಿಗಣಿಸುತ್ತೇವೆ. ದೇಶದ್ರೋಹಿ ಪಿತೂರಿ ಕೆಲಸದಲ್ಲಿ ತೊಡಗಿರುವ ಎಲ್ಲರನ್ನೂ ಅವರ ಸ್ಥಾನಮಾನವನ್ನು ನೋಡದೆ ಬಂಧಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಸಂಸತ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಕದ್ದು ಅವುಗಳನ್ನು ಪಾಕಿಸ್ತಾನದ ಗುಪ್ತಚರ ದಳ ಇಸಿಸ್ ಗೆ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಿನ್ನೆ ಸಲೀಂ ಅವರ ಖಾಸಗಿ ಸಹಾಯಕನನ್ನು ಪೊಲೀಸರು ಬಂಧಿಸಿದ್ದಾರೆ. ಪಾಕಿಸ್ತಾನದ ಹೈ ಕಮಿಷನ್ ಸಿಬ್ಬಂದಿ ಮೆಹಮ್ಮೂದ್ ಅಖ್ತರ್ ನಡೆಸುತ್ತಿರುವ ಬೇಹುಗಾರಿಕೆಗೆ ಫರ್ಹಾತ್ ಖಾನ್ ಮಾಹಿತಿ ಒದಗಿಸುತ್ತಿದ್ದ ಎನ್ನಲಾಗುತ್ತಿದೆ.
ತಮ್ಮ ಮೇಲಿನ ಆರೋಪವನ್ನು ಸಲೀಂ ನಿರಾಕರಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com