ಇನ್ನು ವಿಜ್ಞಾನ, ಗಣಿತದಂತಹ ವಿಷಯಗಳನ್ನು ಬೋಧಿಸಲು ಬಿ.ಎಡ್, ಎಂ.ಎಡ್ ಅಥವಾ ಅದಕ್ಕೆ ಸಮನಾದ ವೃತ್ತಿಪರ ಕೋರ್ಸ್ ಗಳನ್ನು ಕಲಿತು ಶಾಲೆಗಳಲ್ಲಿ ಶಿಕ್ಷಕರಾಗಿ ಸೇರಬೇಕು. ಶೇಕಡಾ 15 ಶಿಕ್ಷಕರಲ್ಲಿ ಈ ಅರ್ಹತೆಗಳಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ಶಿಕ್ಷಣ ಮತ್ತು ತರಬೇತಿ ಜಿಲ್ಲಾ ಸಂಸ್ಥೆಯ ನಿವೃತ್ತ ಪ್ರೊಫೆಸರ್ ಮಧು ಪ್ರಸಾದ್ ಹೇಳುವ ಪ್ರಕಾರ, ಇಲ್ಲಿ ಶಿಕ್ಷಕರನ್ನು ದೂರುವ ಹಾಗಿಲ್ಲ. ಅತ್ಯಲ್ಪ ಸಂಬಳ ನೀಡಿ ಅರ್ಹತೆಯಿಲ್ಲದ ಶಿಕ್ಷಕರನ್ನು ನೇಮಿಸುವುದನ್ನು ಮೊದಲು ಕೇಂದ್ರ ಸರ್ಕಾರ ನಿಲ್ಲಿಸಬೇಕು. ಗ್ರಾಮೀಣ ಮಟ್ಟದಲ್ಲಿ ಕಳಪೆ ಗುಣಮಟ್ಟದ ಶಿಕ್ಷಕರನ್ನು ನೇಮಿಸುವ ಬದಲು ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಗಳನ್ನು ಹೆಚ್ಚಿಸಿ ಸರಿಯಾದ ತರಬೇತಿ ನೀಡಿ ಗುಣಮಟ್ಟದ ಶಿಕ್ಷಕರನ್ನು ನೇಮಿಸಬೇಕು ಎನ್ನುತ್ತಾರೆ.