ಲಖನೌದಲ್ಲಿರುವ ಪಕ್ಷದ ಕಚೇರಿಯಲ್ಲಿ 5 ಕೆಜಿ ತೂಕದ ಕೇಕ್ ನ್ನು ಕತ್ತರಿಸಲು ಸಿದ್ಧತೆ ನಡೆಸಲಾಗಿದ್ದು, ಮುಸ್ಲಿಂ ರಾಷ್ಟ್ರೀಯ ಮಂಚ್ ನ ಕಾರ್ಯಕರ್ತರು ತಮ್ಮ ಮನೆಗಳಲ್ಲಿಯೂ ಸಹ ಬಿರ್ಯಾನಿ ತಯಾರಿಸದೇ ಇರಲು ನಿರ್ಧರಿಸಿದ್ದಾರೆ. ಬದಲಾಗಿ ದಹಿ ವಡಾ ಹಾಗೂ ಇನ್ನಿತರ ತಿನಿಸುಗಳನ್ನು ತಯಾರಿಸಲಿದ್ದಾರೆ ಎಂದು ತಿಳಿದುಬಂದಿದೆ. ಪ್ರಾಣಿಗಳನ್ನು ಬಲಿ ಕೊಡದೇ ಇರುವುದು ಪರಿಸರಕ್ಕೆ ಒಳಿತು ಎಂಬ ಕಾರಣದಿಂದ ಈ ಬಾರಿ ಬಕ್ರೀದ್ ನ್ನು ಹಾಗೂ ಇನ್ನಿತರ ಸಮಾರಂಭ, ಹಬ್ಬಗಳ ವೇಳೆ ಪ್ರಾಣಿ ಬಲಿ ಕೊಡದಂತೆ ಹಲವು ಪರಿಸರವಾದಿಗಳು ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿದ್ದಾರೆ.