ಕುರಿ ಆಕಾರದ ಕೇಕ್ ಕತ್ತರಿಸಿ ಮುಸ್ಲಿಂ ರಾಷ್ಟ್ರೀಯ ಮಂಚ್ ನಿಂದ ಪರಿಸರ ಸ್ನೇಹಿ ಬಕ್ರೀದ್ ಆಚರಣೆ!

ಮುಸ್ಲಿಮರ ಪವಿತ್ರ ಹಬ್ಬ ಬಕ್ರೀದ್ ನ್ನು ಆರ್ ಎಸ್ ಎಸ್ ನ ಮುಸ್ಲಿಮ್ ಘಟಕ ಪರಿಸರಸ್ನೇಹಿಯಾಗಿ ಆಚರಿಸಲು ನಿರ್ಧರಿಸಿದೆ.
ಕೇಕ್(ಸಂಗ್ರಹ ಚಿತ್ರ)
ಕೇಕ್(ಸಂಗ್ರಹ ಚಿತ್ರ)
Updated on
ಲಖನೌ: ಮುಸ್ಲಿಮರ ಪವಿತ್ರ ಹಬ್ಬ ಬಕ್ರೀದ್ ನ್ನು ಆರ್ ಎಸ್ ಎಸ್ ನ ಮುಸ್ಲಿಮ್ ಘಟಕ ಪರಿಸರಸ್ನೇಹಿಯಾಗಿ ಆಚರಿಸಲು ನಿರ್ಧರಿಸಿದೆ. 
ಸಾಮಾನ್ಯವಾಗಿ ಬಕ್ರೀದ್ ದಿನದಂದು ಪ್ರಾಣಿಗಳನ್ನು ಬಲಿಕೊಟ್ಟು ಹಬ್ಬವನ್ನು ಆಚರಿಸುತ್ತಾರೆ. ಆದರೆ ಆರ್ ಎಸ್ ಎಸ್ ನ ಮುಸ್ಲಿಂ ಘಟಕ ಮುಸ್ಲಿಂ ರಾಷ್ಟ್ರೀಯ ಮಂಚ್ ನ ಕಾರ್ಯಕರ್ತರು ಕುರಿ ಆಕಾರದ ಕೇಕ್ ನ್ನು ಕತ್ತರಿಸುವ ಮೂಲಕ ಪರಿಸರ ಸ್ನೇಹಿ ಬಕ್ರೀದ್ ನ್ನು ಆಚರಣೆ ಮಾಡಲು ತೀರ್ಮಾನಿಸಿದ್ದಾರೆ. 
ಲಖನೌದಲ್ಲಿರುವ ಪಕ್ಷದ ಕಚೇರಿಯಲ್ಲಿ 5 ಕೆಜಿ ತೂಕದ ಕೇಕ್ ನ್ನು ಕತ್ತರಿಸಲು ಸಿದ್ಧತೆ ನಡೆಸಲಾಗಿದ್ದು, ಮುಸ್ಲಿಂ ರಾಷ್ಟ್ರೀಯ ಮಂಚ್ ನ ಕಾರ್ಯಕರ್ತರು ತಮ್ಮ ಮನೆಗಳಲ್ಲಿಯೂ ಸಹ ಬಿರ್ಯಾನಿ ತಯಾರಿಸದೇ ಇರಲು ನಿರ್ಧರಿಸಿದ್ದಾರೆ. ಬದಲಾಗಿ ದಹಿ ವಡಾ ಹಾಗೂ ಇನ್ನಿತರ ತಿನಿಸುಗಳನ್ನು ತಯಾರಿಸಲಿದ್ದಾರೆ ಎಂದು ತಿಳಿದುಬಂದಿದೆ. ಪ್ರಾಣಿಗಳನ್ನು ಬಲಿ ಕೊಡದೇ ಇರುವುದು ಪರಿಸರಕ್ಕೆ ಒಳಿತು ಎಂಬ ಕಾರಣದಿಂದ ಈ ಬಾರಿ ಬಕ್ರೀದ್ ನ್ನು ಹಾಗೂ ಇನ್ನಿತರ ಸಮಾರಂಭ, ಹಬ್ಬಗಳ ವೇಳೆ ಪ್ರಾಣಿ ಬಲಿ ಕೊಡದಂತೆ ಹಲವು ಪರಿಸರವಾದಿಗಳು ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿದ್ದಾರೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com