ನವದೆಹಲಿ: ಲಿಬಿಯಾದಲ್ಲಿ ಒಂದು ವರ್ಷದವರೆಗೆ ಒತ್ತೆಯಾಳಾಗಿದ್ದ ಇಬ್ಬರು ಭಾರತೀಯರನ್ನು ರಕ್ಷಿಸಲಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
'' ಲಿಬಿಯಾದಲ್ಲಿ ಕಳೆದ ವರ್ಷ ಜುಲೈ 29ರಂದು ಬಂಧಿತರಾಗಿದ್ದ ಆಂಧ್ರ ಪ್ರದೇಶದ ಟಿ.ಗೋಪಾಲಕೃಷ್ಣ ಮತ್ತು ತೆಲಂಗಾಣದ ಸಿ.ಬಲರಾಮ್ ಕಿಶನ್ ಅವರನ್ನು ಕಾಪಾಡಲಾಗಿದೆ'' ಎಂದು ಅವರು ಟ್ವೀಟ್ ಮಾಡಿದ್ದಾರೆ.
ಲಿಬಿಯಾದ ಸಿರ್ತೆ ವಿಶ್ವವಿದ್ಯಾಲಯದಲ್ಲಿ ಬೋಧಕರಾಗಿದ್ದ ಈ ಇಬ್ಬರು ಭಾರತೀಯರು ಇಸಿಸ್ ಉಗ್ರಗಾಮಿಗಳಿಂದ ಕಳೆದ ಜುಲೈಯಲ್ಲಿ ಅಪಹರಣಕ್ಕೀಡಾಗಿದ್ದರು.