ಗಾಂಧೀ ಜಯಂತಿ ಸನಿಹವಾಗುತ್ತಿರುವ ಹಿನ್ನಲೆಯಲ್ಲಿ 10 ದಿನಗಳ ಹಿಂದೆ ಈ ಪ್ರತಿಮೆಯ ಸ್ಥಳವನ್ನು ಕಂಡುಹಿಡಿದು, ಅದಕ್ಕೆ ಹೊಸದಾಗಿ ಬಣ್ಣ ಬಳಿಯಲು, ಹಳೆಯ ಬಣ್ಣವನ್ನು ಕೆರೆದು ತೆಗೆದಾಗ ಕಾರ್ಮಿಕರು ಹೊಳೆಯುವ ಪ್ರತಿಮೆಯನ್ನು ಕಂಡು ಆಶ್ಚರ್ಯಗೊಂಡಿದ್ದಾರೆ. ವಿಷಯ ತಿಳಿದ ಮುನ್ಸಿಪಲ್ ಅಧ್ಯಕ್ಷ, ಅಕ್ಕಸಾಲಿಗ ಎಸ್ ವಿ ವೈರಕಣ್ಣು ಅವರೊಂದಿಗೆ ಸ್ಥಳಕ್ಕೆ ಬಂದಾಗ ಇದು ಪಂಚಲೋಹದ ವಿಗ್ರಹ ಎಂದು ತಿಳಿದುಬಂದಿದೆ.