ತಿರುಚಿ ರೈಲು ನಿಲ್ದಾಣ ಸಮೀಪ ಪ್ರತಿಭಟನೆ ನಡೆಸಿದ ಜಲ್ಲಿಕಟ್ಟು ಪರ ಕಾರ್ಯಕರ್ತರು ಸೌಂದರ್ಯಾ ಆ ಹುದ್ದೆಯಿಂದ ಕೆಳಗಿಳಿಯಬೇಕು ಎಂದು ಒತ್ತಾಯಿಸಿದರು. ಸ್ವತಃ ರಜನಿಕಾಂತ್ ಅವರೇ ತಮಿಳು ಚಿತ್ರ ಮುರುತ್ತು ಕಾಲೈಯಲ್ಲಿ ಎತ್ತು ತರಬೇತುದಾರನಾಗಿ ಅಭಿನಯಿಸಿದ್ದು, ಅದರಿಂದ ತಮಿಳು ನಾಡಿನ ಗ್ರಾಮೀಣ ಭಾಗದ ಯುವಕರ ಮನ ಗೆಲ್ಲುವಲ್ಲಿ ಸಫಲರಾದರು. ತಮಿಳರ ಸಹಾಯದಿಂದ ಚಿತ್ರರಂಗದಲ್ಲಿ ಬಹಳ ಎತ್ತರಕ್ಕೆ ಬೆಳೆದ ರಜನಿಕಾಂತ್ ಅವರ ಮಗಳಾಗಿ ಅವರು ಪ್ರಾಣಿದಯಾ ಮಂಡಳಿಗೆ ಸೇರ್ಪಡೆಗೊಂಡದ್ದು ದುರದೃಷ್ಟಕರ ಮತ್ತು ಅಸ್ವೀಕೃತ ಅವರು ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಇಲ್ಲದಿದ್ದರೆ ಪ್ರತಿಭಟನೆ ಮುಂದುವರಿಸುವುದಾಗಿ ಆ ಬಣದ ಮುಖ್ಯ ಸಂಚಾಲಕ ಟಿ.ರಾಜೇಶ್ ತಿಳಿಸಿದ್ದಾರೆ.