ಮಾ.29 ರಂದೂ ಸಹ ಸದನದಲ್ಲಿ ಇದೇ ವಿಷಯ ಚರ್ಚೆಯಾಗಿತ್ತು. ಆಗ ಪ್ರತಿಕ್ರಿಯೆ ನೀಡಿದ್ದ ಅರುಣ್ ಜೇಟ್ಲಿ, ಸಂಸತ್ ಸ್ಥಾಯಿ ಸಮಿತಿಯಲ್ಲಿ ತಿದ್ದುಪಡಿ ಮಸೂದೆ ಬಾಕಿ ಇದೆ. ಸ್ಥಾಯಿ ಸಮಿತಿ ನೀಡುವ ವರದಿಯ ಪ್ರಕಾರ ಲೋಕಪಾಲ ನೇಮಕ ಮಾಡುತ್ತೇವೆ ಎಂದು ಹೇಳಿದ್ದರು. ಈಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅರುಣ್ ಜೇಟ್ಲಿ ವಿರುದ್ಧ ನಿಲುವಳಿ ಸೂಚನೆ ಮಂಡಿಸಿರುವ ವೇನುಗೋಪಾಲ್, ಜೇಟ್ಲಿ ಸದನದ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.