ಗೋಮಾಂಸ ಸೇವನೆ ಅವರವರ ಜೀವನ ಶೈಲಿಯ ಆಯ್ಕೆಯಾಗಿದ್ದು, ಅವರಿಗೆ ಬೇಕಾದ ಆಹಾರ ಸೇವನೆ ಜಾತ್ಯತೀತ ಸಂಸ್ಕೃತಿಯ ಒಂದು ಭಾಗ ಮತ್ತು ಜೀವನದ ಅವಶ್ಯಕ ಭಾಗವಾಗಿದ್ದು. ಇದು ಬದುಕುವ ಹಕ್ಕು ಮತ್ತು ಜೀವನದೊಂದಿಗೆ ಸಂಪರ್ಕ ಹೊಂದಿದೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ. ಅಲ್ಲದೆ ಕಸಾಯಿಖಾನೆ ವಿವಾದ ಶೀಘ್ರ ಬಗೆಹರಿಸಿಕೊಳ್ಳುವಂತೆ ಮತ್ತು ಪರವಾನಗಿಗಳನ್ನು ನವೀಕರಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.