ನನಗೆ ನನ್ನ ಕುಟುಂಬವೇ ಸರ್ವಸ್ವ. ನೇತಾಜಿ ಅವರ ಮಾತೇ ಅಂತಿಮವಾಗಿದ್ದು, ಮುಲಾಯಂ ಸಿಂಗ್ ಯಾದವ್ ಅವರನ್ನು ನಡೆಸಿಕೊಂಡ ರೀತಿ ಸರಿಯಾಗಿರಲಿಲ್ಲ ಎಂದು ಅಪರ್ಣಾ ಯಾದವ್ ಹೇಳಿದ್ದಾರೆ. ಇದೇ ವೇಳೆ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿರುವ ಅಪರ್ಣಾ ಯಾದವ್, ಯೋಗಿ ಆದಿತ್ಯನಾಥ್ ಸಂತರಾಗಿದ್ದು ಸಮಸ್ತ ಉತ್ತರ ಪ್ರದೇಶವನ್ನು ತಮ್ಮ ಕುಟುಂಬದಂತೆ ಭಾವಿಸಿ ಅಭಿವೃದ್ಧಿಪಡಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.