ಬಾಬ್ರಿ ಮಸೀದಿ ಪ್ರಕರಣ: ಸಿಬಿಐ ಅರ್ಜಿ ಕುರಿತು ಆದೇಶ ಕಾಯ್ದಿರಿಸಿದ ಸುಪ್ರೀಂ; ಅಡ್ವಾಣಿ, ಜೋಷಿ ವಿರುದ್ಧ ಮತ್ತೆ ವಿಚಾರಣೆ?

ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅರ್ಜಿಯ ಕುರಿತು ವಿಚಾರಣೆ ಪೂರ್ಣಗೊಳಿಸಿರುವ ಸುಪ್ರೀಂ ಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
Updated on
ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅರ್ಜಿಯ ಕುರಿತು ವಿಚಾರಣೆ ಪೂರ್ಣಗೊಳಿಸಿರುವ ಸುಪ್ರೀಂ ಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ. ಮಾಜಿ ಉಪ ಪ್ರಧಾನಿ, ಗೃಹ ಸಚಿವ ಎಲ್ ಕೆ ಅಡ್ವಾಣಿ ಹಾಗೂ ಇತರ ನಾಯಕರ ವಿರುದ್ಧದ ಪ್ರಕರಣಕ್ಕೆ ಮರುಜೀವ ನೀಡಬೇಕೆಂದು ಸಿಬಿಐ ಅರ್ಜಿಯಲ್ಲಿ ಮನವಿ ಮಾಡಿತ್ತು.
ನ್ಯಾ.ಪಿಸಿ ಘೋಸೆ ಹಾಗೂ ನ್ಯಾ.ಆರ್ ಎಫ್ ನಾರಿಮನ್ ಅವರಿದ್ದ  ಸುಪ್ರೀಂ ಕೋರ್ಟ್ ನ ಪೀಠ ಸಿಬಿಐ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದು, ಆದೇಶವನ್ನು ಕಾಯ್ದಿರಿಸಿದೆ. ವಿಚಾರಣೆ ಪೂರ್ಣಗೊಳಿಸಿದ ನಂತರ ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಷಿ ಸೇರಿದಂತೆ ಹಲವರ ವಿಚಾರಣೆಗೆ ಒಪ್ಪಿಗೆ ಸೂಚಿಸುವ ಸೂಚನೆ ನೀಡಿದೆ ಸುಪ್ರೀಂ ಕೋರ್ಟ್.
ತನಿಖೆಯಲ್ಲಿ ವಿಳಂಬವಾಗಿರುವುದಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, 17 ವರ್ಷಗಳಿಂದ ತಾಂತ್ರಿಕ ದೋಷಗಳಿಂದ ಪ್ರಕರಣ ಹಾಗೆಯೇ ಉಳಿದಿದೆ. ನಾವು ಸಾಂವಿಧಾನಿಕ ಶಕ್ತಿಯನ್ನು ಬಳಸಿ ನ್ಯಾಯ ಒದಗಿಸುವುದನ್ನು ಬಯಸುತ್ತಿದ್ದೇವೆ ಎಂದು ಎಂದು ಕೋರ್ಟ್ ಹೇಳಿದೆ. 
ಪ್ರಕರಣದ ವಿಚಾರಣೆ ಲಖನೌದಲ್ಲಿ ಪ್ರತಿ ದಿನದ ಆಧಾರದಲ್ಲಿ ನಡೆಯಬೇಕು ಹಾಗಾದಲ್ಲಿ 2 ವರ್ಷದೊಳಗೆ ಪ್ರಕರಣದ ವಿಚಾರಣೆ ನಡೆಯಲಿದೆ ಎಂದು ಕೋರ್ಟ್ ಹೇಳಿದ್ದು ಯಾವುದೇ ನಿರ್ದೇಶನ ನೀಡುವುದಕ್ಕೆ ನ್ಯಾಯಾಲಯಕ್ಕೆ ಸಂವಿಧಾನದ ಆರ್ಟಿಕಲ್ 142 ನೀಡಿರುವ ಅಧಿಕಾರವನ್ನು ಬಳಸಬಹುದೆಂದು ಕೋರ್ಟ್ ಹೇಳಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com