ಬಾಬಾಸಾಹೇಬ್ ಅಂಬೇಡ್ಕರ್ ಸಮಾಜದ ಎಲ್ಲಾ ವರ್ಗದ ಜನರಿಗೆ ಹಲವು ರೀತಿಯಲ್ಲಿ ಸ್ವತಂತ್ರ್ಯ ಸಿಗಲಿ ಎಂಬ ಕಾರಣಕ್ಕಾಗಿ ಸಂವಿಧಾನ ರಚಿಸಿದರು, ಆದರೆ ಇಷ್ಟು ದೊಡ್ಡ ಸಮಾಜದಲ್ಲಿ ಅವರ ಬಯಕೆಯಂತೆ ಸ್ವಾತಂತ್ರ್ಯ ಸಿಗುತ್ತಿಲ್ಲ, ಇಂದಿನ ಸಮಾಜದಲ್ಲಿ ಮಹಿಳೆಯರು, ಬಡವರು, ದಲಿತರು, ಹಿಂದುಳಿದ ವರ್ಗಗಳು, ಬಡುಕಟ್ಟು ಜನರು ಹಾಗೂ ಬುದ್ಧಿ ಜೀವಿಗಳೆಲ್ಲರೂ ಭಯದಲ್ಲೇ ಬದುಕುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.