ಇತ್ತೀಚಿಗೆ ನಡೆದ ರಾಜೋರಿ ಉಪ ಚುನಾವಣೆಯಲ್ಲಿ ಎಎಪಿ ಠೇವಣಿ ಕಳೆದುಕೊಂಡಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್, ಜರ್ನೈಲ್ ಸಿಂಗ್ ಅವರು ರಾಜೋರಿ ಕ್ಷೇತ್ರ ಬಿಡಲು ಹಲವು ಕಾರಣಗಳಿದ್ದವು. ಅವರು ಸಿಖ್ ಸಮುದಾಯಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಆದರೆ ಅವರು ರಾಜೋರಿ ಕ್ಷೇತ್ರ ಬಿಟ್ಟು ರಾಜಸ್ಥಾನಕ್ಕೆ ಹೋಗಿದ್ದರಿಂದ ಕ್ಷೇತ್ರದ ಜನತೆ ತೀವ್ರ ಬೇಸರಗೊಂಡಿದ್ದಾರೆ. ಆದರೆ ಈ ಫಲಿತಾಂಶ ಏಪ್ರಿಲ್ 23ರಂದು ನಡೆಯಲಿರುವ ದೆಹಲಿ ಮಹಾನಗರ ಪಾಲಿಕೆಗಳ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.