ಮಹಾರಾಷ್ಟ್ರದ ಬೀಚ್ ನಲ್ಲಿ ಬೆಳಗಾವಿಯ 8 ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲು

ಬೆಳಗಾವಿಯ ಹೊರವಲಯದಲ್ಲಿರುವ ಮರಾಠ ಮಂಡಳ ಕಾಲೇಜಿನ 8 ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮಹಾರಾಷ್ಟ್ರದ ಮಾಲ್ವಾನ್ ಪ್ರದೇಶದ ವಯಾರಿ ಬೀಚ್ ನಲ್ಲಿ...
ನೀರು ಪಾಲು
ನೀರು ಪಾಲು
ಸಿಂಧುದುರ್ಗ(ಮಹಾರಾಷ್ಟ್ರ): ಬೆಳಗಾವಿಯ ಹೊರವಲಯದಲ್ಲಿರುವ ಮರಾಠ ಮಂಡಳ ಕಾಲೇಜಿನ 8 ಇಂಜಿನಿಯರಿಂಗ್ ವಿದ್ಯಾರ್ಥಿಗಳು  ಮಾಲ್ವಾನ್ ಪ್ರದೇಶದ ವಯಾರಿ ಬೀಚ್ ನಲ್ಲಿ ನೀರುಪಾಲಾಗಿದ್ದಾರೆ. 
ನಿನ್ನೆ ಕಾಲೇಜಿನಿಂದ 40 ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮಹಾರಾಷ್ಟ್ರಕ್ಕೆ ಪ್ರವಾಸ ತೆರಳಿದ್ದರು. ಇಂದು ವಯಾರಿ ಬೀಚ್ ಗೆ ಈಜಲು ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ. 
ಐವರು ವಿದ್ಯಾರ್ಥಿ ಮತ್ತು ಮೂವರು ವಿದ್ಯಾರ್ಥಿನಿಯರು ನೀರುಪಾಲಾಗಿದ್ದು ಅವರ ಮೃತದೇಹವನ್ನು ಹೊರತೆಗೆಯಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com