ಸಂಜಯ್ ದತ್ ಜೈಲಿನಿಂದ ಹೊರಬಂದ ನಂತರ ನೂರಾನಿಯವರ ಪರ ವಕೀಲರು ಈ ವರ್ಷ ಫೆಬ್ರವರಿಯಲ್ಲಿ ನ್ಯಾಯಾಲಕ್ಕೆ ಹಾಜರಾಗುವಂತೆ ದತ್ ಅವರಿಗೆ ಆದೇಶ ನೀಡಲು ಮನವಿ ಸಲ್ಲಿಸಿದರು. ಸಂಜಯ್ ದತ್ ಅವರು ಜೈಲಿನಿಂದ ಹೊರಗಿರುವಾಗ, ಅವರು ನ್ಯಾಯಾಲಯಕ್ಕೆ ಹಾಜರಾಗಬೇಕು. ಆದರೆ ಅವರು ನ್ಯಾಯಾಲಯಕ್ಕೆ ಹಾಜರಾಗುತ್ತಿಲ್ಲ ಎಂದು ಚಿತ್ರ ನಿರ್ಮಾಪಕ ನೂರಾನಿಯವರ ಪರ ವಕೀಲ ಆರೋಪಿಸಿದ್ದಾರೆ.