ಭಾರತದ ಸೇನಾ ಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಪಾಕ್ ಗಲ್ಲು ಶಿಕ್ಷೆ ವಿಧಿಸಿರುವ ಬಗ್ಗೆ ಟಿವಿ ಚಾನಲ್ವೊಂದು ಪರ್ವೇಜ್ ಮುಶ್ರಫ್ ಅವರ ಸಂದರ್ಶನ ನಡೆಸಿತ್ತು. ಈ ಸಂದರ್ಶನದ ಬಗ್ಗೆ ಓಮರ್ ಅಬ್ದುಲ್ಲಾ ಅವರು ಟೀಕೆ ಮಾಡಿದ್ದು, ಮುಶ್ರಫ್ರನ್ನು ಸಂದರ್ಶನ ಮಾಡುವುದು ಭಾರತದ ಅಭಿವೃದ್ಧಿ ಬಗ್ಗೆ ಪಾಕ್ನ ಮಾಧ್ಯಮಗಳು ದೇವೇಗೌಡರ ಜೊತೆ ಚರ್ಚಿಸುವುದು ಒಂದೇ ಎಂದು ಓಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದರು.