ಈಸ್ಟರ್ ಹಬ್ಬ: ದೇಶದ ಜನತೆಗೆ ಶುಭ ಕೋರಿದ ಉಪ ರಾಷ್ಟ್ರಪತಿ, ಪ್ರಧಾನಿ

ಇಂದು ಈಸ್ಟರ್ ಭಾನುವಾರ. ಈ ಮಂಗಳಕರ ಸಂದರ್ಭದಲ್ಲಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ...
ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಮತ್ತು ಪ್ರಧಾನಿ ನರೇಂದ್ರ ಮೋದಿ
ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಮತ್ತು ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಇಂದು ಈಸ್ಟರ್ ಭಾನುವಾರ. ಈ ಮಂಗಳಕರ ಸಂದರ್ಭದಲ್ಲಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಮತ್ತು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭ ಕೋರಿದ್ದಾರೆ. ಹಬ್ಬ ದೇಶದ ಜನತೆಯಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ತರಲಿ ಎಂದು ಆಶಿಸಿದ್ದಾರೆ.
ಕ್ರೈಸ್ತರ ದೇವರು ಜೀಸಸ್ ನ ಪುನರುಜ್ಜೀವನದ ದಿನ ಎಂದು ನಂಬಲಾಗುವ ಈಸ್ಟರ್ ಹಬ್ಬದ ಅಂಗವಾಗಿ ದೇಶದ ಜನತೆಗೆ ಶುಭ ಕೋರುತ್ತೇನೆ. ಪ್ರೀತಿ ದ್ವೇಷಕ್ಕಿಂತ ಹೆಚ್ಚು ಶಕ್ತಿಯುತವಾಗಿರುತ್ತದೆ. ಮಾನವ ಜನಾಂಗದ ಮೇಲೆ ದಯೆ ತೋರುವ ಈಸ್ಟರ್ ಹಬ್ಬವನ್ನು ಜಾತಿ, ಧರ್ಮ ಬೇಧವಿಲ್ಲದೆ ಆಚರಿಸೋಣ ಎಂದು ಉಪ ರಾಷ್ಟ್ರಪತಿ ಹೇಳಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಈಸ್ಟರ್ ಅಂಗವಾಗಿ ದೇಶದ ಜನತೆಗೆ ಶುಭ ಕೋರಿದ್ದು ಸಮಾಜದಲ್ಲಿ ಸಾಮರಸ್ಯ ಹೆಚ್ಚಲಿ ಎಂದು ಆಶಿಸಿದ್ದಾರೆ.
ಜೀಸಸ್ ಕ್ರೈಸ್ತರನ್ನು ಶಿಲುಬೆಗೇರಿಸಿದ ನಂತರ ಸಮಾಧಿಕ್ರಿಯೆ ಮಾಡಿದ ಬಳಿಕ ಮೂರನೇ ದಿನ ಪುನರುಜ್ಜೀವನವಾಗುತ್ತದೆ ಎಂದು ನಂಬಲಾಗಿದೆ. ಇದರ ಅಂಗವಾಗಿ ಈಸ್ಟರ್ ಹಬ್ಬವನ್ನು ಆಚರಿಸಲಾಗುತ್ತದೆ. ಲೆಂಟ್ ಎಂಬ 40  ದಿನಗಳ ಉಪವಾಸ ಮುಕ್ತಾಯದ ದಿನ ಇಂದು ಆಗಿದೆ. ಕ್ರೈಸ್ತರೆಲ್ಲರೂ ಚರ್ಚ್ ಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com