ರಸೀದಿ ಸಹಿತ ಮತಯಂತ್ರ: ಆಯೋಗದ ಯೋಜನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ರಸೀದಿ ಸಹಿತ ಮತಯಂತ್ರದ ಬಳಕೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ಮತಯಂತ್ರ
ಮತಯಂತ್ರ
Updated on
ನವದೆಹಲಿ: ರಸೀದಿ ಸಹಿತ ಮತಯಂತ್ರದ ಬಳಕೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.   
ಇತ್ತೀಚೆಗಷ್ಟೇ ನಡೆದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಪೈಕಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮತಯಂತ್ರಗಳನ್ನು ದುರ್ಬಳಕೆ ಮಾಡಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಈ ಹಿನ್ನೆಲೆಯಲ್ಲಿ ಮತದಾರರು ಯಾವ ಪಕ್ಷಕ್ಕೆ ಮತ ಹಾಕಿದ್ದಾರೆ ಎಂಬ ಬಗ್ಗೆ ವಿವರಣೆ ಇರುವ ರಸೀದಿ ಸಹಿತ ಮತಯಂತ್ರಗಳ ಬಳಕೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. 
ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆಯ ಹಿನ್ನೆಲೆಯಲ್ಲಿ ವೆರಿಫೈಡ್‌ ಪೇಪರ್‌ ಆಡಿಟ್‌ ಟ್ರೈಯಲ್‌ (ವಿವಿಪಿಎಟಿ) ಅಳವಡಿಕೆ ಮಾಡಿದ ಮತಯಂತ್ರಗಳನ್ನು ಬಳಕೆ ಮಾಡಲಾಗುತ್ತದೆ. ರಸೀದಿ ನೀಡುವ 16 ಲಕ್ಷ ಮತಯಂತ್ರಗಳ ಖರೀದಿಗೆ ಕೇಂದ್ರ ಚುನಾವಣಾ ಆಯೋಗ 3,174 ಕೋಟಿ ಅನುದಾನ ಕೇಳಿತ್ತು. 
ಚುನಾವಣಾ ಆಯೋಗದ ಮನವಿಗೆ ಸ್ಪಂದಿಸಿದ್ದ ಕೇಂದ್ರ ಸರ್ಕಾರ ಈ ವರೆಗೂ 9,200 ಕೋಟಿ ರೂಗಳನ್ನು ನೀಡಿದೆ. ವಿವಿಪಿಎಟಿ ಅಳವಡಿಕೆ ಮಾಡಿದ ನಂತರ ಮತದಾರರು ಯಾವ ಪಕ್ಷಕ್ಕೆ ಮತ ಹಾಕಿದ್ದಾರೆ ಎಂಬ ಬಗ್ಗೆ ವಿವರಣೆ ಇರುವ ರಸೀದಿ ಲಭ್ಯವಿರುತ್ತದೆ. ಅದನ್ನು ಮತದಾರಿಗೆ ಕೊಡಲಾಗುವುದಿಲ್ಲ. ಆದರೆ ತಾವು ಯಾರಿಗೆ ಮತಚಲಾವಣೆ ಮಾಡಿದ್ದೇವೆ ಎಂಬ ಬಗ್ಗೆ ಮತದಾರರು ರಸೀದಿಯನ್ನು ವೀಕ್ಷಿಸಬಹುದಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com