ಅಹ್ಮದ್ ಪಟೇಲ್
ಅಹ್ಮದ್ ಪಟೇಲ್

ಆಜಾನ್ ಗೆ ಧ್ವನಿವರ್ಧಕ ಬಳಸಬೇಕೆಂದು ಕುರಾನ್, ಇಸ್ಲಾಂ ನಲ್ಲಿ ಹೇಳಿಲ್ಲ: ಅಹ್ಮದ್ ಪಟೇಲ್

ಮಸೀದಿಗಳಲ್ಲಿ ಆಜಾನ್ ಗೆ ಧ್ವನಿವರ್ಧಕ ಬಳಸಬೇಕೆಂದು ಇಸ್ಲಾಂ ಮತ್ತು ಕುರಾನ್ ಗ್ರಂಥಗಳಲ್ಲಿ ಹೇಳಿಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್ ..
Published on
ನವದೆಹಲಿ: ಮಸೀದಿಗಳಲ್ಲಿ ಆಜಾನ್ ಗೆ ಧ್ವನಿವರ್ಧಕ ಬಳಸಬೇಕೆಂದು ಇಸ್ಲಾಂ ಮತ್ತು ಕುರಾನ್ ಗ್ರಂಥಗಳಲ್ಲಿ ಹೇಳಿಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್ ಹೇಳಿದ್ದಾರೆ.
ಬಾಲಿವುಡ್ ಗಾಯಕ ಸೋನು ನಿಗಮ್ ಆಜಾನ್ ಕುರಿತು ಟ್ವೀಟ್ ಮಾಡಿದ ನಂತರ ದೆಹಲಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅಹ್ಮದ್ ಪಟೇಲ್  ಇಂದಿನ ದಿನಗಳಲ್ಲಿ ಜನರು ತಮ್ಮ ಫೋನ್ ಗಳಲ್ಲಿ ಆಜಾನ್ ಗಡಿಯಾರ ಇಟ್ಟುಕೊಂಡಿರುತ್ತಾರೆ, ಹೀಗಿರುವಾಗ ಧ್ವನಿವರ್ಧಕಗಳ ಬಳಕೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ. 
ಧ್ವನಿ ವರ್ಧಕಗಳ ಮೂಲಕ ಆಜಾನ್ ಕರೆ ನೀಡಬೇಕೆಂದು ಎಲ್ಲಿಯೂ ಹೇಳಿಲ್ಲ, ಯಾರೊಬ್ಬರಿಗೂ ತೊಂದರೆ ಕೊಡದ ರೀತಿಯಲ್ಲಿ  ಆಜಾನ್ ಕರೆ ನೀಡಬೇಕೆಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com