ತಮಿಳುನಾಡು ಸರ್ಕಾರದ ಸಹಕಾರ ಸಚಿವ ಸೆಲ್ಲೂರ್ ಕೆ ರಾಜು ಥರ್ಮಾಕೋಲ್ ನ್ನು ಬಳಕೆ ಮಾಡಿ ನೀರು ಆವಿಯಾಗುವ ಸಮಸ್ಯೆಯನ್ನು ತಡೆಯುವ ವಿಧಾನವನ್ನು ಕಂಡುಕೊಂಡಿದ್ದಾರೆ. ಅಷ್ಟೇ ಅಲ್ಲದೇ, ವೈಗೈ ಅಣೆಕಟ್ಟೆಯಲ್ಲಿ ಥರ್ಮಾಕೋಲ್ ನ್ನು ಒಂದಕ್ಕೆ ಒಂದನ್ನು ಅಂಟಿಸಿ ನೀರಿನ ಮೇಲ್ಮೈನಲ್ಲಿರಿಸುವ ಸಚಿವರ ವಿನೂತನ ಐಡಿಯಾ ಪ್ರಾಯೋಗಿಕವಾಗಿ ನಡೆದಿದ್ದನ್ನು ರಾಜ್ಯದ ಪ್ರಮುಖ ಮಾಧ್ಯಮಗಳ ವರದಿಗಾರರೂ ಸಹ ಕಣ್ತುಂಬಿಕೊಂಡಿದ್ದಾರೆ.