ಮಾವೋವಾದಿಗಳ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆ: ಗಾಯಗೊಂಡ ಸಿಆರ್ ಪಿಎಫ್ ಯೋಧ

ಛತ್ತೀಸ್ ಗಢದಲ್ಲಿ ಮಾವೋವಾದಿಗಳು ನಡೆಸಿದ ದಾಳಿಯಲ್ಲಿ ಬದುಕುಳಿದಿರುವ ಸಿಆರ್ ಪಿಎಫ್ ಯೋಧ ನಕ್ಸಲರ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಹೇಳಿದ್ದಾರೆ.
ಸಿಆರ್ ಪಿಎಫ್ ಯೋಧ
ಸಿಆರ್ ಪಿಎಫ್ ಯೋಧ
ರಾಯ್ ಪುರ: ಛತ್ತೀಸ್ ಗಢದಲ್ಲಿ ಮಾವೋವಾದಿಗಳು ನಡೆಸಿದ ದಾಳಿಯಲ್ಲಿ ಬದುಕುಳಿದಿರುವ ಸಿಆರ್ ಪಿಎಫ್ ಯೋಧ ನಕ್ಸಲರ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಹೇಳಿದ್ದಾರೆ. 
ಕನಿಷ್ಠ 50 ಮಾವೋವಾದಿಗಳನ್ನು ಹತ್ಯೆ ಮಾಡುವ ಮೂಲಕ ಮಾವೋವಾದಿಗಳ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಸಿಆರ್ ಪಿಎಫ್ ನ ಯೋಧ ಮಹೇಂದ್ರ ಕುಮಾರ್ ಹೇಳಿದ್ದಾರೆ. ಮಾವೋವಾದಿಗಳ ದಾಳಿಯಿಂದ ಗಾಯಗೊಂಡಿರುವ ಮಹೇಂದ್ರ ಕುಮಾರ್, ಚೇತರಿಸಿಕೊಂಡ ತಕ್ಷಣ ತಾವೇ ಸುಕ್ಮಾ ಜಿಲ್ಲೆಗೆ ಹೋಗುವುದಾಗಿ ತಿಳಿಸಿದ್ದಾರೆ.  
ಮಾವೋವಾದಿಗಳ ದಾಳಿಗೆ ಪ್ರತಿ ದಾಳಿ ನಡೆಸಲು ಪ್ರಾರಂಭಿಸಿದ ತಕ್ಷಣವೇ 3-4 ಗುಂಪುಗಳಾಗಿ ದಿಕ್ಕಾಪಾಲಾಗಿ ಓಡಲು ಪ್ರಾರಂಭಿಸಿದರು ಎಂದು ಮಹೇಂದ್ರ ಕುಮಾರ್ ಘಟನೆಯನ್ನು ವಿವರಿಸಿದ್ದು, ಸಿಆರ್ ಪಿಎಫ್ ಯೋಧರು ಬರುತ್ತಿರುವುದರ ಬಗ್ಗೆ ದನಗಾಹಿಗಳು ಮಾವೋವಾದಿಗಳಿಗೆ ಮಾಹಿತಿ ರವಾನೆ ಮಾಡಿದ್ದಾರೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com