ಮಾವೋವಾದಿಗಳ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆ: ಗಾಯಗೊಂಡ ಸಿಆರ್ ಪಿಎಫ್ ಯೋಧ

ಛತ್ತೀಸ್ ಗಢದಲ್ಲಿ ಮಾವೋವಾದಿಗಳು ನಡೆಸಿದ ದಾಳಿಯಲ್ಲಿ ಬದುಕುಳಿದಿರುವ ಸಿಆರ್ ಪಿಎಫ್ ಯೋಧ ನಕ್ಸಲರ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಹೇಳಿದ್ದಾರೆ.
ಸಿಆರ್ ಪಿಎಫ್ ಯೋಧ
ಸಿಆರ್ ಪಿಎಫ್ ಯೋಧ
Updated on
ರಾಯ್ ಪುರ: ಛತ್ತೀಸ್ ಗಢದಲ್ಲಿ ಮಾವೋವಾದಿಗಳು ನಡೆಸಿದ ದಾಳಿಯಲ್ಲಿ ಬದುಕುಳಿದಿರುವ ಸಿಆರ್ ಪಿಎಫ್ ಯೋಧ ನಕ್ಸಲರ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಹೇಳಿದ್ದಾರೆ. 
ಕನಿಷ್ಠ 50 ಮಾವೋವಾದಿಗಳನ್ನು ಹತ್ಯೆ ಮಾಡುವ ಮೂಲಕ ಮಾವೋವಾದಿಗಳ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಸಿಆರ್ ಪಿಎಫ್ ನ ಯೋಧ ಮಹೇಂದ್ರ ಕುಮಾರ್ ಹೇಳಿದ್ದಾರೆ. ಮಾವೋವಾದಿಗಳ ದಾಳಿಯಿಂದ ಗಾಯಗೊಂಡಿರುವ ಮಹೇಂದ್ರ ಕುಮಾರ್, ಚೇತರಿಸಿಕೊಂಡ ತಕ್ಷಣ ತಾವೇ ಸುಕ್ಮಾ ಜಿಲ್ಲೆಗೆ ಹೋಗುವುದಾಗಿ ತಿಳಿಸಿದ್ದಾರೆ.  
ಮಾವೋವಾದಿಗಳ ದಾಳಿಗೆ ಪ್ರತಿ ದಾಳಿ ನಡೆಸಲು ಪ್ರಾರಂಭಿಸಿದ ತಕ್ಷಣವೇ 3-4 ಗುಂಪುಗಳಾಗಿ ದಿಕ್ಕಾಪಾಲಾಗಿ ಓಡಲು ಪ್ರಾರಂಭಿಸಿದರು ಎಂದು ಮಹೇಂದ್ರ ಕುಮಾರ್ ಘಟನೆಯನ್ನು ವಿವರಿಸಿದ್ದು, ಸಿಆರ್ ಪಿಎಫ್ ಯೋಧರು ಬರುತ್ತಿರುವುದರ ಬಗ್ಗೆ ದನಗಾಹಿಗಳು ಮಾವೋವಾದಿಗಳಿಗೆ ಮಾಹಿತಿ ರವಾನೆ ಮಾಡಿದ್ದಾರೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com