ಕೋಲ್ಕತಾದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಸುಕ್ಮಾ ಎನ್ ಕೌಂಟರ್ ದಾಳಿಯ ವಿಚಾರವಾಗಿ ಬಿಜೆಪಿ ಕಠಿಣ ನಿರ್ಧಾರ ಕೈಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ. ಅಭಿವೃದ್ಧಿಯಿಂದ ಮಾತ್ರ ಹಿಂಸಾಚಾರ ಕೊನೆಗಾಣಲು ಸಾಧ್ಯ ಎಂದು ಹೇಳಿರುವ ಅಮಿತ್ ಶಾ, ಈ ಪ್ರಕ್ರಿಯೆಗೆ ಅಡ್ಡಿ ಬರುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.