ತೀವ್ರ ಹೃದಯಾಘಾತದಿಂದ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಾವು?

ವ್ರ ಹೃದಯಾಘಾತಕ್ಕೆ ಒಳಗಾಗಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ಮೃತಪಟ್ಟಿದ್ದಾನೆ ಎಂಬ ಸುದ್ದಿ ಹರಿದಾಡುತ್ತಿದೆ...
ದಾವೂದ್ ಇಬ್ರಾಹಿಂ
ದಾವೂದ್ ಇಬ್ರಾಹಿಂ
ನವದೆಹಲಿ: ತೀವ್ರ ಹೃದಯಾಘಾತಕ್ಕೆ ಒಳಗಾಗಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ಮೃತಪಟ್ಟಿದ್ದಾನೆ ಎಂಬ ಸುದ್ದಿ ಹರಿದಾಡುತ್ತಿದೆ.
ತೀವ್ರ ಹೃದಯಾಘಾತಕ್ಕೆ ಒಳಗಾದ ದಾವೂದ್ ಇಬ್ರಾಹಿಂಗೆ ಕರಾಚಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ವರದಿಯಾಗಿದೆ. ಆದರೆ ದಾವೂದ್ ಸಾವಿನ ಬಗ್ಗೆ ಎಲ್ಲಿಯೂ ಅಧಿಕೃತವಾದ ಮಾಹಿತಿ ಪ್ರಕಟವಾಗಿಲ್ಲ. 
ಆದರೆ, ದಾವೂದ್ ಬಾಯ್ ಆರೋಗ್ಯ ಸ್ಥಿರವಾಗಿದ್ದು, ಅವರ ಆರೋಗ್ಯದ ಬಗ್ಗೆ ಎದ್ದಿರುವ ಊಹಾ ಪೋಹಗಳೆಲ್ಲಾ ಸುಳ್ಳು ವದಂತಿ ಎಂದು ದಾವೂದ್ ನ ಆಪ್ತ ಛೋಟಾ ಶಕೀಲ್ ಹೇಳಿದ್ದಾರೆಂದು ಸಿಎನ್ ಎನ್ ನ್ಯೂಸ್ 18 ಸುದ್ದಿ ಸಂಸ್ಥೆ ವರದಿ ಮಾಡಿದೆ.
61 ವರ್ಷದ ದಾವೂದ್ ಇಬ್ರಾಹಿಂ ಏಪ್ರಿಲ್ 19 ರಂದು ಆತನ ಅಳಿಯ ಕರಾಚಿಯ ನಿವಾಸದಲ್ಲಿ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಭಾಗವಹಿಸಿದ್ದ ಎಂದು ಇಂಟಲಿಜೆನ್ಸ್  ಏಜೆನ್ಸಿ ವರದಿ ಮಾಡಿವೆ.
1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ದಾವೂದ್ ಆರೋಪಿಯಾಗಿದ್ದಾನೆ. 1993 ರಲ್ಲಿ ನಡೆದ ಮುಂಬೈ ಸರಣಿ ಸ್ಫೋಟದಲ್ಲಿ 257ಕ್ಕೂ ಅಧಿಕ ಮಂದಿ ಸಾವನ್ನಪ್ಪಿ 717 ಮಂದಿ ಗಾಯಗೊಂಡಿದ್ದರು. ದಾವೂದ್ ಆರೋಗ್ಯದ ಮಾಹಿತಿಯನ್ನು ಬಗ್ಗೆ ಪಾಕಿಸ್ತಾನ ರಹಸ್ಯವಾಗಿಟ್ಟಿದೆ. 1980 ರಲ್ಲಿ ದಾವೂದ್ ಭಾರತ ಬಿಟ್ಟು ಓಡಿ ಹೋಗಿ ತಲೆ ಮರೆಸಿಕೊಂಡಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com