ನಿವೃತ್ತ ಕರ್ನಲ್ ಮನೆ ಮೇಲೆ ದಾಳಿ: 1ಕೋಟಿ ನಗದು,40 ರೈಫಲ್, 50 ಸಾವಿರ ಮದ್ದುಗುಂಡು ವಶ

ನಿವೃತ್ತ ಕರ್ನಲ್ ಮನೆ ಮೇಲೆ ದಾಳಿ ನಡೆಸಿದ ಕಂದಾಯ ಗುಪ್ತಚರ ಮಹಾ ನಿರ್ದೇಶನಾಲಯ(ಡಿಆರ್‍ಐ) ಭಾರೀ ಪ್ರಮಾಣದ ಆಯುಧಗಳನ್ನು
ದೇವೇಂದ್ರ  ಸಿಂಗ್
ದೇವೇಂದ್ರ ಸಿಂಗ್
Updated on
ಮೀರತ್(ಯುಪಿ): ನಿವೃತ್ತ ಕರ್ನಲ್ ಮನೆ ಮೇಲೆ ದಾಳಿ ನಡೆಸಿದ ಕಂದಾಯ ಗುಪ್ತಚರ ಮಹಾ ನಿರ್ದೇಶನಾಲಯ(ಡಿಆರ್‍ಐ) ಭಾರೀ ಪ್ರಮಾಣದ ಆಯುಧಗಳನ್ನು ವಶಪಡಿಸಿಕೊಂಡಿದೆ.
ಉತ್ತರಪ್ರದೇಶದ ಮೀರತ್ ನಲ್ಲಿರುವ ನಿವೃತ್ತ ಕರ್ನಲ್ ದೇವೇಂದ್ರ ಸಿಂಗ್ ನಿವಾಸದ ಮೇಲೆ ಡಿಆರ್‍ಐ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ದಾಳಿ ವೇಳೆ 40 ರೈಫಲ್, 50 ಸಾವಿರ ಮದ್ದುಗುಂಡುಗಳು, ಪಿಸ್ತೂಲ್, 1 ಕೋಟಿ ರೂ. ನಗದು ಹಣ ಸಿಕ್ಕಿದೆ.ಸತತ 16 ಗಂಟೆಗಳ ಪರಿಶೀಲನೆಯಲ್ಲಿ ಕಂಟೈನರ್‍ನಲ್ಲಿ ತುಂಬಿದ್ದ 117 ಕೆಜಿ ಮಾಂಸ, ಪ್ರಾಣಿಗಳ ತಲೆಬುರಡೆಗಳು, ಕೊಂಬುಗಳು, ಚರ್ಮಗಳು ಸಿಕ್ಕಿವೆ.
ಬೆಳಗ್ಗೆ ದಾಳಿ ನಡೆಸಿದ್ದು, ಈ ವೇಳೆ ವಿದೇಶಿ ರೈಫಲ್ ಗಳು ಸಿಕ್ಕಿದೆ. ಈ ರೈಫಲ್‍ಗಳಿಗೆ ಯಾವುದೇ ಲೈಸನ್ಸ್ ಇಲ್ಲ. ಇದೇ ವೇಳೆ ಮಗನಾಗಿರುವ ರಾಷ್ಟ್ರಮಟ್ಟದ ಶೂಟರ್ ಪ್ರಶಾಂತ್ ಬಿಶ್ನೋಯಿ ಬಗ್ಗೆ ವಿಚಾರಿಸಿದ್ದು, ದೇವೇಂದ್ರ ಸಿಂಗ್ ಯಾವುದೇ ಮಾಹಿತಿ ನೀಡಿಲ್ಲ. ಆತ ದಾಳಿ ನಡೆದ ಬಳಿಕ ನಾಪತ್ತೆಯಾಗಿದ್ದಾನೆ .ಇದುವರೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನು ಬಂಧಿಸಿಲ್ಲ. ಮನೆಯ ಮುಂದೆ ಪೊಲೀಸ್ ಪಡೆ ನಿಯೋಜಿಸಲಾಗಿದೆ, 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com