ವಜಾಗೊಂಡ ಆರು ತ್ರಿಪುರ ಟಿಎಂಸಿ ಶಾಸಕರು ಆ.7ರಂದು ಬಿಜೆಪಿ ಸೇರ್ಪಡೆ

ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮ್ ನಾಥ್ ಕೊವಿಂದ್ ಅವರಿಗೆ ಮತ ಹಾಕಿ ಪಕ್ಷದಿಂದ ವಜಾಗೊಂಡಿರುವ ತ್ರಿಪುರ ತೃಣಮೂಲ....
ಬಿಜೆಪಿ ಬೆಂಬಲಿಗರು
ಬಿಜೆಪಿ ಬೆಂಬಲಿಗರು
Updated on
ಅಗರತಾಲ: ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮ್ ನಾಥ್ ಕೊವಿಂದ್ ಅವರಿಗೆ ಮತ ಹಾಕಿ ಪಕ್ಷದಿಂದ ವಜಾಗೊಂಡಿರುವ ತ್ರಿಪುರ ತೃಣಮೂಲ ಕಾಂಗ್ರೆಸ್(ಟಿಎಂಸಿ)ನ ಆರು ಶಾಸಕರು ಆಗಸ್ಟ್ 7ರಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ.
ವಜಾಗೊಂಡ ಟಿಎಂಸಿ ಶಾಸಕರು ನಾಳೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡುತ್ತಿದ್ದು, ಅವರು ಬಿಜೆಪಿ ಸೇರ್ಪಡೆ ಕುರಿತು ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗಿದೆ ಎಂದು ಬಿಜೆಪಿ ವಕ್ತಾರ ವಿಕ್ಟೊರ್ ಶೋಮ್ ಅವರು ಹೇಳಿದ್ದಾರೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಮಧಬ್ ಅವರ ನೇತೃತ್ವದಲ್ಲಿ ಸೋಮವಾರ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಆರು ಶಾಸಕರು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರಲಿದ್ದಾರೆ ಎಂದು ಶೋಮ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com