ಸುಲ್ತಾನರು ಹೋಗಿದ್ದಾರೆ. ಆದರೆ ನಾವು ಇನ್ನೂ ಸುಲ್ತಾನರಂತೆ ವರ್ತಿಸುತ್ತಿದ್ದೇವೆ. ಇನ್ನಾದರೂ ಪಕ್ಷದ ಏಳಿಗೆಗಾಗಿ ಹೊಸ ಕಾರ್ಯತಂತ್ರಗಳನ್ನು ರೂಪಿಸುವ ಅಗತ್ಯವಿದೆ ಎಂದರು. ಇನ್ನು ಜೈರಾಮ್ ರಮೇಶ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಮೆಟ್ಟಿ ನಿಲ್ಲಲ್ಲು ಕಾಂಗ್ರೆಸ್ ನಾಯಕರು ಸಾಮೂಹಿಕ ಪ್ರಯತ್ನ ನಡೆಸುವ ಅಗತ್ಯವಿದೆ ಎಂದು ಹೇಳಿದ್ದು ನಿಜಕ್ಕೂ ಅರ್ಥಗರ್ಭಿತವಾಗಿದೆ ಎಂದರು.