ಪ್ರಧಾನಿಯವರು ತಮ್ಮ ಭಾಷಣದಲ್ಲಿ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪ್ರಸ್ತಾಪಿಸಿದರು. ಆದರೆ ಅದು ಒಂದು ವರ್ಷ ಹಳೆಯ ವಿಷಯ. ಕಳೆದ ಸೆಪ್ಟೆಂಬರ್ ನಂತರ ನಮ್ಮ ದೇಶದಲ್ಲಿ ಹಲವು ದಾಳಿಗಳು, ಗುಂಡಿನ ಚಕಮಕಿ ನಡೆದಿವೆ. ಅದರ ಬಗ್ಗೆ ಹೇಳಬೇಕಾಗಿತ್ತು. ಈ ಸಂದರ್ಭದಲ್ಲಿ, ಸುರಕ್ಷಿತ ಕೈಗಳಲ್ಲಿ ದೇಶದ ಹಿತಾಸಕ್ತಿ ನೀಡುವ ಬಗ್ಗೆ ದೇಶದ ಜನತೆಗೆ ಭರವಸೆ ನೀಡಬೇಕಾಗಿತ್ತು ಎಂದರು.