ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ನಿಹ್ಲಾನಿ ಅವರು ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವೆ ಸ್ಮೃತಿ ಇರಾನಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಸ್ಮೃತಿ ಇರಾನಿ ಹೋದ ಇಲಾಖೆಯಲ್ಲೆಲ್ಲಾ ವಿವದಗಳು ಉಂಟಾಗುತ್ತವೆ ಎಂದಿದ್ದಾರೆ. ಇದೇ ವೇಳೆ ಉಡ್ತಾ ಪಂಜಾಬ್, ಸಲ್ಮಾನ್ ಖಾನ್ ಅವರ ಭಜರಂಗಿ ಭಾಯಿಜಾನ್ ಚಿತ್ರಗಳಿಗೆ ಕೇಂದ್ರ ಹೇಗೆ ನಿರ್ದೇಶನ ನೀಡುತ್ತಿತ್ತು ಎಂಬುದನ್ನೂ ನಿಹ್ಲಾನಿ ಬಹಿರಂಗಪಡಿಸಿದ್ದಾರೆ.